Sunday, December 12, 2010

ಚನೈನಲ್ಲಿ ನಡೆಯುವ ಅಂತರಾಷ್ಟ್ರೀಯ ಶ್ವಾನ ಪ್ರದರ್ಶನದಲ್ಲಿ ಮುಧೋಳ ನಾಯಿ

ಚನೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಗುರುವಾರ ನಗರದಿಂದ ಚನೈಗೆ ಹೊರಟ ಮುಧೋಳ ತಳಿ ನಾಯಿಗಳ ತಂಡಕ್ಕೆ ಪಶು ಸಂಗೋಪನಾ ಇಲಾಖೆಯ ಉಪನಿದರ್ೇಶಕ ಎಂ.ಎಸ್.ಪಾಳೇಗಾರ ಹಾಗೂ ಇಲಾಖೆಯ ಅಧಿಕಾರಿಗಳು ಶುಭ ಕೋರಿದರು.

ಬಾಗಲಕೋಟೆ  ;  ಆದಿಲ್ ಶಾಹಿ ರಾಜ್ಯದ ರಾಜಧಾನಿ ಬಿಜಾಪೂರದ ಅಂದಿನ ಅವಿಭಾಜ್ಯ ಅಂಗವಾಗಿದ್ದ ಮುಧೋಳ ಪ್ರಾಂತ್ಯದ ಶ್ರೀಮಂತ ರಾಜ ಮಾಲೋಜಿರಾವ್ ಘೋರ್ಪಡೆ ಮತ್ತು ಲೆಫ್ಟಿನಂಟ್ ನಾನಾ ಸಾಹೇಬ ಚಂದನಶಿವಾ ಅವರು ಪೋಷಣೆಯಲ್ಲಿ ಅಭಿವೃದ್ದಿ ಹೊಂದಿದ ಮುಧೋಳ ತಳಿ ನಾಯಿ ಈಗ ಅಂತರಾಷ್ಟ್ರೀಯ ಮಟ್ಟದ ತಳಿಗಳಲ್ಲಿ ಸೇರ್ಪಡೆಯಾಗಿದ್ದು ಡಿಸೆಂಬರ್ ದಿ.11 ಹಾಗೂ 12 ರಂದು ಚನೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲು ನಗರದಿಂದ ಇಂದು ತೆರಳಿದವು.
ಬೇಟೆ ಯಾಡಲು ಸುಪ್ರಸಿದ್ದವಾಗಿರುವ ಮುಧೋಳ ತಳಿ ನಾಯಿಗಳು ಅತ್ಯಂತ ಬಲಿಷ್ಠ ಸ್ನಾಯುಗಳನ್ನು ಹೊಂದಿದ್ದು ಓಟಕ್ಕೆ ಅನುಕೂಲವಾಗುವಂತೆ ಕಾಲುಗಳು ಮತ್ತು ದೇಹರಚನೆ ಇದ್ದು ಗಾಳಿಯನ್ನು ಸೀಳಿಕೊಂಡು ಮುನ್ನುಗ್ಗುವ ಪೈಪೋಟಿ ಹೊಂದಿರುವ ಈ ನಾಯಿಗಳು ಅತ್ಯಂತ ಪ್ರಾಮಾಣಿಕ ಕಾವಲುಗಾರ ನಾಯಿಯಾಗಿದೆ. ಒಟ್ಟು 23 ಅತ್ಯುತ್ತಮ ಹಾಗೂ ಪ್ರದರ್ಶನದಲ್ಲಿ ಭಾಗವಹಿಸಲು ಯೋಗ್ಯವುಳ್ಳ ನಾಯಿಗಳು ಬಾಗಲಕೋಟೆಯಿಂದ ತೆರಳಿದ್ದು 8 ಹೆಣ್ಣು ನಾಯಿ ಹಾಗೂ 15 ಗಂಟು ನಾಯಿಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ.
ಡೊಂಕು ಬಾಲದ ನಾಯಿಗಳ ವಿರುದ್ದವಾಗಿ ಈ ನಾಯಿಗಳ ಬಾಲ ನೇರವಾಗಿ ಇರುತ್ತದೆ, ತನ್ನದೆ ಆದ ವೈಶಿಷ್ಠ್ಯತೆ ಹೊಂದಿರುವ ಈ ನಾಯಿ ತಳಿಗೆ ಅಂತರಾಷ್ಟ್ರೀಯ ಮಟ್ಟಕ್ಕೆ ಸೇರ್ಪಡೆಯಾಗಿರುವದು ಕನರ್ಾಟಕದ ಹೆಮ್ಮೆಯ ಪ್ರತೀಕವಾಗಿದೆ. ಇಂದು ಸ್ಥಳೀಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಈ ನಾಯಿ ತಳಿಯ ಸರ್ವತೋಮುಖ ಅಭಿವೃದ್ದಿಗೆ ಅನೇಕ ಯೋಜನೆಗಳನ್ನು ಸಹ ಹಾಕಿಕೊಂಡಿದ್ದು ಕನರ್ಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ ಮುಧೋಳದ ತಿಮ್ಮಾಪೂರ ರಸ್ತೆಯಲ್ಲಿ ಶ್ವಾನ ಸಂಶೋಧನಾ ಕೇಂದ್ರವನ್ನು ಸಹ ಪ್ರಾರಂಭಿಸುತ್ತಿದೆ. ಸಕರ್ಾರ ಹಾಗೂ ವಿಶ್ವವಿದ್ಯಾಲಯಕ್ಕಿಂತ ಮುಖ್ಯವಾಗಿ ಮುಧೋಳದ ರಾಜ ಮಾಲೋಜಿರಾವ್ ಘೋರ್ಪಡೆ ಕುಟುಂಬ ಲೆಫ್ಟಿನೆಂಟ್ ಚಂದನಶಿವ ಕುಟುಂಬಕ್ಕೆ ಈ ನಾಯಿ ತಳಿ ಅಭಿವೃದ್ದಿ ಪಡಿಸುವದಕ್ಕಾಗಿ ಇನಾಮ ನೀಡಿದ್ದರು, ಇಂದಿಗೂ ಚಂದನಶಿವ ಕುಟುಂಬ ಈ ನಾಯಿ ತಳಿಯನ್ನು ಪೋಷಿಸಿ ಅಭಿವೃದ್ದಿ ಪಡಿಸುತ್ತಿದ್ದಾರೆ.
ಮುಧೋಳ ತಳಿ ನಾಯಿಯನ್ನು 1969 ರಲ್ಲಿಯೇ ಭಾರತ ರಾಷ್ಟ್ರೀಯ ಕೆನಲ್ ಕ್ಲಬ್ ನಿಂದ ಅಂಗೀಕ್ರತಗೊಂಡಿತ್ತು ಅಲ್ಲದೆ 1990 ರಲ್ಲಿ ಮೈಸೂರು ಕೆನಲ್ ಕ್ಲಬ್ ಈ ತಳಿಯ ನಾಯಿಗಳ ಪ್ರದರ್ಶನಕ್ಕಾಗಿ ಪ್ರಮುಖ ವೇದಿಕೆ ಕಲ್ಪಿಸಿಕೊಟ್ಟಿತ್ತು. ಸಧ್ಯ ಈ ತಳಿ ನಾಯಿ ಅಂತರಾಷ್ಟ್ರೀಯ ಮಟ್ಟದ ತಳಿಗಳಲ್ಲಿ ಸೇರ್ಪಡೆಯಾಗಿದೆ.
ಶ್ವಾನಗಳನ್ನು ಹಾಗೂ ಶ್ವಾನ ಮಾಲೀಕರನ್ನು ಬೀಳ್ಕೊಟ್ಟು ಈ ಸಂದರ್ಭದಲ್ಲಿ ಮಾತನಾಡಿದ ಪಶು ಸಂಗೋಪನಾ ಇಲಾಖೆಯ ಉಪನಿದರ್ೇಶಕ ಎಂ.ಎಸ್.ಪಾಳೇಗಾರ ಅಂತರಾಷ್ಟ್ರೀಯ ಮಟ್ಟದ ತಳಿಗಳಲ್ಲಿ ಸೇರ್ಪಡೆಯಾಗಿರುವ ಮುಧೋಲ ನಾಯಿ ಪ್ರಥಮ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದು ಮುಧೋಳ ನಾಯಿ ತಳಿಗಳನ್ನು ಜಗತ್ತಿನಾದ್ಯಂತ ಪರಿಚಯಿಸಲು ಈ ಪ್ರದರ್ಶನ ಸಹಕಾರಿಯಾಗಲಿದೆ ಎಂದರು.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ರ ವಿರುದ್ದ ಪ್ರಪ್ರಥಮವಾಗಿ ಬಂಡಾಯ ಎದ್ದಿದ್ದ ಮುಧೋಳ ತಾಲೂಕಿನ ಹಲಗಲಿಯ ವೀರರಾದ ರಾಮ, ಬಾಲ, ಜಡಗಾ ಅವರ ಸಾತ್ ನೀಡಿದ ನಾಯಿ ತಳಿ ಸಧ್ಯ ಅಂತರಾಷ್ಟ್ರೀಯ ಮಟ್ಟದ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಚನೈಗೆ ತೆರಳಿವೆ. ಮುಧೋಳ ತಳಿ ನಾಯಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಹೊಂದುತ್ತಿರುವದು ಹೆಮ್ಮೆ ಸಂಗತಿ ಎಂದು ಸಾರ್ವಜನಿಕರು ಹರ್ಷದಿಂದ ಹೇಳುತ್ತಿದ್ದಾರೆ.

Sunday, December 5, 2010

ಮಕ್ಕಳ ಪ್ರತಿಭಾ ಪ್ರದರ್ಶನ ; ಅಂಧ ಕಲಾವಿದೆ ಕೃತಿಕಾ

                                                        ಅಂಧ ಕಲಾವಿದೆ ಕೃತಿಕಾ ಜಂಗಿನಮಠ.

                                                 ಶ್ರೀನಿಧಿ ವೀರಾಪೂರ ಅವರ ನವಿಲು ನೃತ್ಯದ ಭಂಗಿ.


                                 ಪುಟ್ಟ ಬಾಲಕ ನಚಿಕೇತ ದೊಡ್ಡಬಸವರಾಜ ಕೀ ಬೋರ್ಡ ವಾದನ ಮಾಡುತ್ತಿರುವದು.

 ಬಾಗಲಕೋಟೆ 5- ನವನಗರದ ಕಲಾಭವನ ಚಪ್ಪಾಳೆ ಸದ್ದಿನಿಂದ ಸಂಭ್ರಮಿಸಿತ್ತು, ಅಂಧ ಕಲಾವಿದೆಯ ಕೊಳಲು ವಾದನಕ್ಕೆ ತಲೆದೂಗಿಸಿ, ಕಲಾಸ್ವಾದನೆ ಮಾಡಿ ಚಪ್ಪಾಳೆಯ ಮೂಲಕ ಆಕೆಯ ಕಲೆಗೆ ಪ್ರೋತ್ಸಾಹ ನೀಡಿದ ಜನ ಕೊಳಲಿನ ನಿನಾದದ ಗುಂಗಿನಲ್ಲಿ ತೇಲಾಡಿದರು.
ಅಂಧ ಕಲಾವಿದೆ ವಿಜಾಪೂರದ ಪುಟ್ಟ ಬಾಲಕಿ ಕೃತಿಕಾ ಜಂಗಿನಮಠ ಅವರ ಕೊಳಲಿನ ನಿನಾದ ಆಸ್ವಾದಿಸಲು ಅನುವು ಮಾಡಿಕೊಟ್ಟವರು ಗದ್ದನಕೇರಿಯ ಶರಣ ನೂಲಿಚಂದಯ್ಯ ಶಿಕ್ಷಣ ಗ್ರಾಮೀಣಾಭಿವೃದ್ದಿ ಸಂಸ್ಥೆ. ಇದರ ಸಾರಥಿ ವಿಜಯಕುಮಾರ ಅವರ ತಂಡ ಈ ಬಾಲಕೀಯ ಕಲೆ ಪ್ರದಶರ್ಿಸಲು ಒಂದು ಅದ್ಭುತ ವೇದಿಕೆ ನಿಮರ್ಿಸಿ ಆ ವೇದಿಕೆಯಲ್ಲಿ ಪುಟ್ಟ ಪುಟಾಣಿಗಳ ಕಲಾ ಪ್ರತಿಭಾ ಪ್ರದರ್ಶನವೂ ಜರುಗಿತು.
ರಾಜ್ಯದ ವಿವಿಧೆಡೆಯಲ್ಲಿ ಕಾರ್ಯಕ್ರಮಗಳನ್ನು ನೀಡಿರುವ ಬಾಲಕಿ ಕೃತಿಕಾ ಅಂಧವಾಗಿದ್ದರೂ ಕಲಾ ದೃಷ್ಠಿ ಮಾತ್ರ ಅಗಾಧವಾದದ್ದು, ಜನರು ಆಕೆಯ ಕಲೆಯನ್ನು ಆಸ್ವಾದಿಸುವದನ್ನು ನೋಡದ ಈ ಬಾಲಕಿ ಜನರು ನೀಡುವ ಚಪ್ಪಾಳೆಯೇ ಈಕೆಗೆ ಪ್ರೋತ್ಸಹಾ. ಅಣ್ಣ ಕಾತರ್ಿಕ ಜಂಗಿನಮಠ ಈಕೆಗೆ ತಬಲಾ ಸಾಥ್ ನೀಡುತ್ತಾನೆ. ನೀ ತಂದ ಕಾಣಿಕೆ ಚಿತ್ರದ ಜೇನಿನ ಹೊಳೆಯೋ...,ಹಾಲಿನ ಮಳೆಯೋ..., ಶಿಶುನಾಳ ಶರೀಫರ ತರವಲ್ಲಾ ತಗೀ ನಿನ್ನ ತಂಬೂರಿ..., ಭೂಪ ರಾಗ ಸೇರಿದಂತೆ ಮತ್ತಿತರ ಚಿತ್ರ ಗೀತೆಗಳನ್ನು, ರಾಗಗಳನ್ನು ನುಡಿಸಿದ ಕೃತಿಕಾ ಅತ್ಯಂತ ಪ್ರತಿಭಾವಂತಳಾಗಿದ್ದಾಳೆ ಎನ್ನುವದು ನೆರೆದ ಜನ ಆಕೆಗೆ ನೀಡಿದ ಪ್ರೋತ್ಸಾಹ ದಿಂದ ತಿಳಿಯಬಹುದು. ಆಕೆಯ ಕಲೆಗೆ ಮೆಚ್ಚಿ ಕೆಲವರು ಗೌರವ ಕಣಿಕೆ ನೀಡಿದ್ದಾರೆ.
ಇನ್ನೂಳಿದಂತೆ ವಿಕಿ ಹಾಗೂ ತಂಡದವರು ಚಿತ್ರ ಗೀತೆಗಳನ್ನು ಸಾದರ ಪಡಿಸಿದರು, ಪುಟ್ಟ ಪುಟಾಣಿಗಳು ತಮ್ಮ ಪ್ರತಿಭೆಗಳನ್ನು ಸಹ ಸಾದರಪಡಿಸಿದರು. ಶ್ರೀನಿಧಿ ವೀರಾಪುರ ಎಂಬ ಪುಟ್ಟ ಬಾಲಕಿ ನವಿಲು ನೃತ್ಯ ಮಾಡಿ ಜನ ಮೆಚ್ಚುಗೆ ಪಡೆದಳು. ನಚಿಕೇತ ದೊಡ್ಡಬಸವರಾಜ ಅನಿಸುತಿದೆ ಯಾಕೋ ಇಂದು..., ಗೀತೆಗೆ ಕೀ ಬೋರ್ಡ ವಾದನ ಮಾಡಿ ಶಬ್ಬಾಸ್ಗೀರಿ ಪಡೆದರು.
ನಗರಸಭೆ ಅಧ್ಯಕ್ಷ ಶ್ರೀಮತಿ ಜ್ಯೋತಿ ಭಜಂತ್ರಿ ಸೇರಿದಂತೆ ಸೇರಿದ್ದ ಮಕ್ಕಳೆಲ್ಲ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಂಧ ಕಲಾವಿದೆ ಕೃತಿಕಾಳಿಗೆ ಶರಣ ನೂಲಿಚಂದಯ್ಯ ಗ್ರಾಮೀಣ ಅಭಿವೃದ್ದಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಯೂರೋ ಕಿಡ್ಸ ಸೇರಿದಂತೆ ಹಲವಾರು ಸಂಸ್ಥೆಗಳು, ಗಣ್ಯರು ಕೃತಿಕಾಳಿಗೆ ಗೌರವ ಕಾಣಿಗೆ ಅಪರ್ಿಸಿದರು.

Friday, December 3, 2010

ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಅಂಗವಿಕಲರ ಸಾಮೂಹಿಕ ವಿವಾಹ

           ಬಾಗಲಕೋಟೆ 3- ಒಬ್ಬರಿಗೆ ಕಾಲಿಲ್ಲ, ಇನ್ನೂ ಕೆಲವರು ಅಂಧರು, ಇನ್ನೂ ಕೆಲವರು ನಡೆಯಲು ಬಾರದವರು, ಇವರ ಕೈ ಹಿಡಿದವರು ಸಾಮಾನ್ಯರು. ಜಾತಿ ಬೇಧವಷ್ಟೆ ಅಲ್ಲ ಧರ್ಮ ಭೇಧವೂ ಇರಲಿಲ್ಲ, ಮಾನವೀಯತೆ ಮೌಲ್ಯ ಇಲ್ಲಿ ಎದ್ದು ಕಾಣುತ್ತಿತ್ತು. ವಿಶ್ವ ಅಂಗವಿಕಲ ದಿನಾಚರಣೆಯ ನಿಮಿತ್ಯ ನಗರದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ಸಾಮೂಹಿಕ ವಿವಾಹದಲ್ಲಿನ ವೈಶಿಷ್ಠ್ಯ.
ಶಬರೀಶ ಅಂಗವಿಕಲರ ಕ್ಷೇಮಾಭಿವೃದ್ದಿ ಸಂಸ್ಥೆ, ಇಳಕಲ್ನ ಆಶಾದೀಪ ಸಂಗವಿಕಲರ ಸರ್ವ ಅಭಿವೃದ್ದಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ಸಾಮೂಹಿಕ ವಿವಾಹದಲ್ಲಿ ಸಾವಿವಾರು ಜನ ಆಗಮಿಸಿದ್ದರು. ಶ್ರೀಗಳ ಮಂತ್ರೋದ್ಘಾರ, ಮೌಲ್ವಿಗಳ ಉಪದೇಶದಡಿಯಲ್ಲಿ ನಡೆದ ಈ ಭಾವಪೂರ್ಣ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಅಂಗವಿಕಲರು, ವಧು ಅಂಗವಿಕಲೆಯಾದರೆ ವರ ಸಮಾನ್ಯ, ವರ ಅಂಗವಿಕಲೆಯಾದರೆ ವಧು ಸಾಮಾನ್ಯದವಳಾಗಿದ್ದಳು. ಆತ್ಮಬಲವನ್ನು ಜೊತೆಗಿಟ್ಟುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಜಿಲ್ಲೆಯ ನಾನಾಭಾಗಳಿಂದ ಮಾತ್ರವಲ್ಲದೆ ಪಾವಗಡ, ಕೋಲಾರ ಮತ್ತಿರಡೆಗಳಿಂದ ಆಗಮಿಸಿದ್ದ ಜೋಡಿಗಳು ಈ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಷ್ಟ್ರ ಪ್ರಶಸ್ತಿ ವಿಜೇತ ವಿಕಲಚೇತನ ಘನಶ್ಯಾಂ ಭಾಂಡಗೆಯವರ ನೇತೃತ್ವದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಇಳಕಲ್ ಗುರು ಮಹಾಂತ ಸ್ವಾಮಿಗಳು ಮಂತ್ರವನ್ನು ಉಪದೇಶಿಸಿದರು, ಸಂದರ್ಭಕ್ಕನುಸಾರವಾಗಿ ಅಶೋಕ ಕಲಬುಗರ್ಿ ವಚನಗಳನ್ನು ಸಾದರ ಪಡಿಸಿದರು.
ಮುಂಬೈ ಭಯೋತ್ಪಾದನೆಯಲ್ಲಿ ವೀರ ಮರಣಹೊಂದಿದ ಸಂದೀಪ ಉನ್ನಕೃಷ್ಣನ್ ತಂದೆ ಕೆ.ಉನ್ನಿಕೃಷ್ಣನ್, ತಾಯಿ ಧನಲಕ್ಷ್ಮೀಯವರು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದ ವಿಶೇಷವಾಗಿತ್ತು. 14 ಅಂಗವಿಕಲ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸರ್ವ ಧಮರ್ಿಯರು ಪಾಲ್ಗೊಂಡಿದ್ದರು. ಭಾವೈಕ್ಯತೆಯ ಸಂದೇಶ ಸಾರಿದ ಸಾಮೂಹಿಕ ವಿವಾಹದಲ್ಲಿ 8 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಹುಲಿಯಪ್ಪ ಕುರಿ ಜೊತೆ ರೇಣುಕಾ ಮುತಗಣ್ಣವರ, ಶಿವಪುತ್ರಪ್ಪ ಬಾಗಿ ಜೊತೆ ಲಕ್ಷ್ಮೀ ಪೂಜಾರಿ, ರುದ್ರಪ್ಪ ಅಡಿವೆಪ್ಪ ಜೊತೆ ಮಂಜುಳಾ ಪೂಜಾರಿ, ದಾನಯ್ಯ ಕಾಂಬಳೆಮಠ ಜೊತೆ ಶಾಂತಾ ಹಿರೇಮಠ, ಮಂಜುನಾಥ ಕಂಬಾರ ಜೊತೆ ಸುಮಕ್ಕಾ ಕುರಿಯವರ, ಮಂಜುನಾಥ ಸಾವಕಾರ ಜೊತೆ ಮಹಾದೇವಿ ಗಾಣಿಗೇರ, ಮಲ್ಲಪ್ಪ ಜಿಕ್ಕಣ್ಣವರ ಜೊತೆ ಲಾಯವ್ವ ನಂದ್ಯಾಳ, ಈಶ್ವರ ಕಿತ್ತಲಿ ಜೊತೆ ಗಂಗಮ್ಮಾ ನವಲಗುಂದ, ಶ್ರೀಶೈಲ ಕೊಲ್ಕಾರ ಜೊತೆ ಲಕ್ಷ್ಮೀಬಾಯಿ ಹಿರೇಮಠ, ಕುಮಾರ ಜಾಧವ ಜೊತೆ ಸಂಗೀತಾ ಪವಾರ, ರಾಮಾಂಜನೇಯ ದೊಡ್ಡಕರಿಯಪ್ಪ ಜೊತೆ ಶ್ಯಾಮಲಾ ಎಂ.ಎಸ್., ಮಹ್ಮದರಫೀಕ ಮುದ್ದೇಬಿಹಾಳ ಜೊತೆ ಶಂಶದಾಬೇಗಂ ಸೋಲ್ಲಾಪೂರ, ಸೈದುಸಾಬ ಕೆರೂರ ಜೊತೆ ಸೈನಾಜಬೇಗಂ ಬುಡ್ಡೇಸಿ, ಯಮನೂರಪ್ಪ ತಳವಾರ ಜೊತೆ ಈರಮ್ಮ ದಿದ್ದಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳಾಗಿದ್ದು ಶ್ರೀಗಳು, ಉನ್ನಿಕೃಷ್ಣನ್ ದಂಪತಿಗಳು, ಮಾಜಿ ಸಚಿವರು, ಗಣ್ಯರು ಸೇರಿದಂತೆ ಸಾವಿವಾರು ಜನರು ಆಶೀರ್ವದಿಸಿದರು.
ಇಳಕಲ್ ಚಿತ್ತರಗಿ ಸಂಸ್ಥಾನ ಮಠದ ಶ್ರೀ ಮಹಾಂತಸ್ವಾಮಿಗಳು ಅಧ್ಯಕ್ಷತೆ ವಹಿಸಿ ನವವಧುವರರಿಗೆ ಉಪದೇಶಿಸಿದರು. ಜೀವನದ ಸಾರವನ್ನು ಅಥರ್ೈಸಿಕೊಟ್ಟರು. ಚರಂತಿಮಠದ ಶ್ರೀ ಮ.ನಿ.ಪ್ರ ಪ್ರಭುಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಮಾತನಾಡಿ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಿ ಎಂದು ಸಲಹೆ ನೀಡಿದರು. ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಶಿರೂರಿನ ಡಾ.ಬಸವಲಿಂಗ ಮಹಾಸ್ವಾಮಿಗಳು, ಭೋವಿ ಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪ್ರಭುಲಿಂಗೇಶ್ವರ ಶುಗರ್ಸ ಅಧ್ಯಕ್ಷ ಜಗದೀಶ ಗುಡಗುಂಟಿ, ಮಾಜಿ ಸಚಿವ ಹುಲ್ಲಪ್ಪ ಮೇಟಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಶ್ರೀನಿವಾಸ ಬಳ್ಳಾರಿ, ವಿಜಾಪೂರದ ಎಂ.ಎಸ್.ಖೇಡ, ಡಾ.ಶ್ರೀಮತಿ ಅರುಣಾ ಅಕ್ಕಿ, ಶೀಮತಿ ಜಯಶ್ರೀ ಸಾಲಿಮಠ, ಎಸ್.ಎಸ್.ರೇಷ್ಮೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿದರ್ೇಶಕ ಎಸ್.ಎಚ್.ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಸಿದ್ದರಾಮ ಮನಹಳ್ಳಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆ.ಉನ್ನಿಕೃಷ್ಣನ್ ಹಾಗೂ ಶ್ರೀಮತಿ ಧನಲಕ್ಷ್ಮೀ ಉನ್ನಿಕೃಷ್ಣನ್ ಈ ಸಮಾರಂಭದ ಕೇಂದ್ರ ಬಿಂದುಗಳಾಗಿದ್ದರೂ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಘನಶ್ಯಾಂ ಭಾಂಡಗೆ ಅವರು ಮಾಡುತ್ತಿರುವ ಕಾರ್ಯ ಅಭೂತಪೂರ್ವವಾದದ್ದು, ನವ ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಬಾಳಿ ತಮ್ಮ ಮನೆಯನ್ನು ಬೆಳಗಿರಿ ಎಂದು ಶುಭಹಾರೈಸಿದರು.
ಶಬರೀಶ ಅಂಗವಿಕಲ ಕ್ಷೇಮಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಘನಶ್ಯಾಂ ಭಾಂಡಗೆ, ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ದಿ ಸಂಸ್ಥೆ ಅಧ್ಯಕ್ಷ ರಘು ಹುಬ್ಬಳ್ಳಿ, ಈ ಸಮಾರಂಭದ ಸಂಚಾಲಕ ಅನಂತ ಧೋಂಗಡಿ, ಸಹ ಸಂಚಾಲಕಿ ಶ್ರೀಮತಿ ಸ್ಪೂತರ್ಿ ಭಟ್ ನೇತೃತ್ವ ವಹಿಸಿದ್ದರು. ಮಹೆಬೂಬ ತೊಣಶ್ಯಾಳ, ಸುರೇಶ ತುಳಗೇರಿ, ದ್ಯಾಮಣ್ಣ ಬೆಲ್ಲದಡಿ, ಸಂಗಮೇಶ ಭಾವಿಕಟ್ಟಿ ಇವರ ಕೈ ಜೋಡಿಸಿದ್ದರು.
ಒಟ್ಟಾರೆಯಾಗಿ ಅದ್ದೂರಿ ಸಮಾರಂಭದಲ್ಲಿ ಅಂಗವಿಕಲರ ದಿನಾಚರಣೆಯಂದು 14 ವಿಕಲಚೇತನ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾವಿರಾರು ಜನರು ಆಶೀರ್ವದಿಸಿದರು.