Sunday, December 12, 2010

ಚನೈನಲ್ಲಿ ನಡೆಯುವ ಅಂತರಾಷ್ಟ್ರೀಯ ಶ್ವಾನ ಪ್ರದರ್ಶನದಲ್ಲಿ ಮುಧೋಳ ನಾಯಿ

ಚನೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಗುರುವಾರ ನಗರದಿಂದ ಚನೈಗೆ ಹೊರಟ ಮುಧೋಳ ತಳಿ ನಾಯಿಗಳ ತಂಡಕ್ಕೆ ಪಶು ಸಂಗೋಪನಾ ಇಲಾಖೆಯ ಉಪನಿದರ್ೇಶಕ ಎಂ.ಎಸ್.ಪಾಳೇಗಾರ ಹಾಗೂ ಇಲಾಖೆಯ ಅಧಿಕಾರಿಗಳು ಶುಭ ಕೋರಿದರು.

ಬಾಗಲಕೋಟೆ  ;  ಆದಿಲ್ ಶಾಹಿ ರಾಜ್ಯದ ರಾಜಧಾನಿ ಬಿಜಾಪೂರದ ಅಂದಿನ ಅವಿಭಾಜ್ಯ ಅಂಗವಾಗಿದ್ದ ಮುಧೋಳ ಪ್ರಾಂತ್ಯದ ಶ್ರೀಮಂತ ರಾಜ ಮಾಲೋಜಿರಾವ್ ಘೋರ್ಪಡೆ ಮತ್ತು ಲೆಫ್ಟಿನಂಟ್ ನಾನಾ ಸಾಹೇಬ ಚಂದನಶಿವಾ ಅವರು ಪೋಷಣೆಯಲ್ಲಿ ಅಭಿವೃದ್ದಿ ಹೊಂದಿದ ಮುಧೋಳ ತಳಿ ನಾಯಿ ಈಗ ಅಂತರಾಷ್ಟ್ರೀಯ ಮಟ್ಟದ ತಳಿಗಳಲ್ಲಿ ಸೇರ್ಪಡೆಯಾಗಿದ್ದು ಡಿಸೆಂಬರ್ ದಿ.11 ಹಾಗೂ 12 ರಂದು ಚನೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲು ನಗರದಿಂದ ಇಂದು ತೆರಳಿದವು.
ಬೇಟೆ ಯಾಡಲು ಸುಪ್ರಸಿದ್ದವಾಗಿರುವ ಮುಧೋಳ ತಳಿ ನಾಯಿಗಳು ಅತ್ಯಂತ ಬಲಿಷ್ಠ ಸ್ನಾಯುಗಳನ್ನು ಹೊಂದಿದ್ದು ಓಟಕ್ಕೆ ಅನುಕೂಲವಾಗುವಂತೆ ಕಾಲುಗಳು ಮತ್ತು ದೇಹರಚನೆ ಇದ್ದು ಗಾಳಿಯನ್ನು ಸೀಳಿಕೊಂಡು ಮುನ್ನುಗ್ಗುವ ಪೈಪೋಟಿ ಹೊಂದಿರುವ ಈ ನಾಯಿಗಳು ಅತ್ಯಂತ ಪ್ರಾಮಾಣಿಕ ಕಾವಲುಗಾರ ನಾಯಿಯಾಗಿದೆ. ಒಟ್ಟು 23 ಅತ್ಯುತ್ತಮ ಹಾಗೂ ಪ್ರದರ್ಶನದಲ್ಲಿ ಭಾಗವಹಿಸಲು ಯೋಗ್ಯವುಳ್ಳ ನಾಯಿಗಳು ಬಾಗಲಕೋಟೆಯಿಂದ ತೆರಳಿದ್ದು 8 ಹೆಣ್ಣು ನಾಯಿ ಹಾಗೂ 15 ಗಂಟು ನಾಯಿಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ.
ಡೊಂಕು ಬಾಲದ ನಾಯಿಗಳ ವಿರುದ್ದವಾಗಿ ಈ ನಾಯಿಗಳ ಬಾಲ ನೇರವಾಗಿ ಇರುತ್ತದೆ, ತನ್ನದೆ ಆದ ವೈಶಿಷ್ಠ್ಯತೆ ಹೊಂದಿರುವ ಈ ನಾಯಿ ತಳಿಗೆ ಅಂತರಾಷ್ಟ್ರೀಯ ಮಟ್ಟಕ್ಕೆ ಸೇರ್ಪಡೆಯಾಗಿರುವದು ಕನರ್ಾಟಕದ ಹೆಮ್ಮೆಯ ಪ್ರತೀಕವಾಗಿದೆ. ಇಂದು ಸ್ಥಳೀಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಈ ನಾಯಿ ತಳಿಯ ಸರ್ವತೋಮುಖ ಅಭಿವೃದ್ದಿಗೆ ಅನೇಕ ಯೋಜನೆಗಳನ್ನು ಸಹ ಹಾಕಿಕೊಂಡಿದ್ದು ಕನರ್ಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ ಮುಧೋಳದ ತಿಮ್ಮಾಪೂರ ರಸ್ತೆಯಲ್ಲಿ ಶ್ವಾನ ಸಂಶೋಧನಾ ಕೇಂದ್ರವನ್ನು ಸಹ ಪ್ರಾರಂಭಿಸುತ್ತಿದೆ. ಸಕರ್ಾರ ಹಾಗೂ ವಿಶ್ವವಿದ್ಯಾಲಯಕ್ಕಿಂತ ಮುಖ್ಯವಾಗಿ ಮುಧೋಳದ ರಾಜ ಮಾಲೋಜಿರಾವ್ ಘೋರ್ಪಡೆ ಕುಟುಂಬ ಲೆಫ್ಟಿನೆಂಟ್ ಚಂದನಶಿವ ಕುಟುಂಬಕ್ಕೆ ಈ ನಾಯಿ ತಳಿ ಅಭಿವೃದ್ದಿ ಪಡಿಸುವದಕ್ಕಾಗಿ ಇನಾಮ ನೀಡಿದ್ದರು, ಇಂದಿಗೂ ಚಂದನಶಿವ ಕುಟುಂಬ ಈ ನಾಯಿ ತಳಿಯನ್ನು ಪೋಷಿಸಿ ಅಭಿವೃದ್ದಿ ಪಡಿಸುತ್ತಿದ್ದಾರೆ.
ಮುಧೋಳ ತಳಿ ನಾಯಿಯನ್ನು 1969 ರಲ್ಲಿಯೇ ಭಾರತ ರಾಷ್ಟ್ರೀಯ ಕೆನಲ್ ಕ್ಲಬ್ ನಿಂದ ಅಂಗೀಕ್ರತಗೊಂಡಿತ್ತು ಅಲ್ಲದೆ 1990 ರಲ್ಲಿ ಮೈಸೂರು ಕೆನಲ್ ಕ್ಲಬ್ ಈ ತಳಿಯ ನಾಯಿಗಳ ಪ್ರದರ್ಶನಕ್ಕಾಗಿ ಪ್ರಮುಖ ವೇದಿಕೆ ಕಲ್ಪಿಸಿಕೊಟ್ಟಿತ್ತು. ಸಧ್ಯ ಈ ತಳಿ ನಾಯಿ ಅಂತರಾಷ್ಟ್ರೀಯ ಮಟ್ಟದ ತಳಿಗಳಲ್ಲಿ ಸೇರ್ಪಡೆಯಾಗಿದೆ.
ಶ್ವಾನಗಳನ್ನು ಹಾಗೂ ಶ್ವಾನ ಮಾಲೀಕರನ್ನು ಬೀಳ್ಕೊಟ್ಟು ಈ ಸಂದರ್ಭದಲ್ಲಿ ಮಾತನಾಡಿದ ಪಶು ಸಂಗೋಪನಾ ಇಲಾಖೆಯ ಉಪನಿದರ್ೇಶಕ ಎಂ.ಎಸ್.ಪಾಳೇಗಾರ ಅಂತರಾಷ್ಟ್ರೀಯ ಮಟ್ಟದ ತಳಿಗಳಲ್ಲಿ ಸೇರ್ಪಡೆಯಾಗಿರುವ ಮುಧೋಲ ನಾಯಿ ಪ್ರಥಮ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದು ಮುಧೋಳ ನಾಯಿ ತಳಿಗಳನ್ನು ಜಗತ್ತಿನಾದ್ಯಂತ ಪರಿಚಯಿಸಲು ಈ ಪ್ರದರ್ಶನ ಸಹಕಾರಿಯಾಗಲಿದೆ ಎಂದರು.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ರ ವಿರುದ್ದ ಪ್ರಪ್ರಥಮವಾಗಿ ಬಂಡಾಯ ಎದ್ದಿದ್ದ ಮುಧೋಳ ತಾಲೂಕಿನ ಹಲಗಲಿಯ ವೀರರಾದ ರಾಮ, ಬಾಲ, ಜಡಗಾ ಅವರ ಸಾತ್ ನೀಡಿದ ನಾಯಿ ತಳಿ ಸಧ್ಯ ಅಂತರಾಷ್ಟ್ರೀಯ ಮಟ್ಟದ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಚನೈಗೆ ತೆರಳಿವೆ. ಮುಧೋಳ ತಳಿ ನಾಯಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಹೊಂದುತ್ತಿರುವದು ಹೆಮ್ಮೆ ಸಂಗತಿ ಎಂದು ಸಾರ್ವಜನಿಕರು ಹರ್ಷದಿಂದ ಹೇಳುತ್ತಿದ್ದಾರೆ.

Sunday, December 5, 2010

ಮಕ್ಕಳ ಪ್ರತಿಭಾ ಪ್ರದರ್ಶನ ; ಅಂಧ ಕಲಾವಿದೆ ಕೃತಿಕಾ

                                                        ಅಂಧ ಕಲಾವಿದೆ ಕೃತಿಕಾ ಜಂಗಿನಮಠ.

                                                 ಶ್ರೀನಿಧಿ ವೀರಾಪೂರ ಅವರ ನವಿಲು ನೃತ್ಯದ ಭಂಗಿ.


                                 ಪುಟ್ಟ ಬಾಲಕ ನಚಿಕೇತ ದೊಡ್ಡಬಸವರಾಜ ಕೀ ಬೋರ್ಡ ವಾದನ ಮಾಡುತ್ತಿರುವದು.

 ಬಾಗಲಕೋಟೆ 5- ನವನಗರದ ಕಲಾಭವನ ಚಪ್ಪಾಳೆ ಸದ್ದಿನಿಂದ ಸಂಭ್ರಮಿಸಿತ್ತು, ಅಂಧ ಕಲಾವಿದೆಯ ಕೊಳಲು ವಾದನಕ್ಕೆ ತಲೆದೂಗಿಸಿ, ಕಲಾಸ್ವಾದನೆ ಮಾಡಿ ಚಪ್ಪಾಳೆಯ ಮೂಲಕ ಆಕೆಯ ಕಲೆಗೆ ಪ್ರೋತ್ಸಾಹ ನೀಡಿದ ಜನ ಕೊಳಲಿನ ನಿನಾದದ ಗುಂಗಿನಲ್ಲಿ ತೇಲಾಡಿದರು.
ಅಂಧ ಕಲಾವಿದೆ ವಿಜಾಪೂರದ ಪುಟ್ಟ ಬಾಲಕಿ ಕೃತಿಕಾ ಜಂಗಿನಮಠ ಅವರ ಕೊಳಲಿನ ನಿನಾದ ಆಸ್ವಾದಿಸಲು ಅನುವು ಮಾಡಿಕೊಟ್ಟವರು ಗದ್ದನಕೇರಿಯ ಶರಣ ನೂಲಿಚಂದಯ್ಯ ಶಿಕ್ಷಣ ಗ್ರಾಮೀಣಾಭಿವೃದ್ದಿ ಸಂಸ್ಥೆ. ಇದರ ಸಾರಥಿ ವಿಜಯಕುಮಾರ ಅವರ ತಂಡ ಈ ಬಾಲಕೀಯ ಕಲೆ ಪ್ರದಶರ್ಿಸಲು ಒಂದು ಅದ್ಭುತ ವೇದಿಕೆ ನಿಮರ್ಿಸಿ ಆ ವೇದಿಕೆಯಲ್ಲಿ ಪುಟ್ಟ ಪುಟಾಣಿಗಳ ಕಲಾ ಪ್ರತಿಭಾ ಪ್ರದರ್ಶನವೂ ಜರುಗಿತು.
ರಾಜ್ಯದ ವಿವಿಧೆಡೆಯಲ್ಲಿ ಕಾರ್ಯಕ್ರಮಗಳನ್ನು ನೀಡಿರುವ ಬಾಲಕಿ ಕೃತಿಕಾ ಅಂಧವಾಗಿದ್ದರೂ ಕಲಾ ದೃಷ್ಠಿ ಮಾತ್ರ ಅಗಾಧವಾದದ್ದು, ಜನರು ಆಕೆಯ ಕಲೆಯನ್ನು ಆಸ್ವಾದಿಸುವದನ್ನು ನೋಡದ ಈ ಬಾಲಕಿ ಜನರು ನೀಡುವ ಚಪ್ಪಾಳೆಯೇ ಈಕೆಗೆ ಪ್ರೋತ್ಸಹಾ. ಅಣ್ಣ ಕಾತರ್ಿಕ ಜಂಗಿನಮಠ ಈಕೆಗೆ ತಬಲಾ ಸಾಥ್ ನೀಡುತ್ತಾನೆ. ನೀ ತಂದ ಕಾಣಿಕೆ ಚಿತ್ರದ ಜೇನಿನ ಹೊಳೆಯೋ...,ಹಾಲಿನ ಮಳೆಯೋ..., ಶಿಶುನಾಳ ಶರೀಫರ ತರವಲ್ಲಾ ತಗೀ ನಿನ್ನ ತಂಬೂರಿ..., ಭೂಪ ರಾಗ ಸೇರಿದಂತೆ ಮತ್ತಿತರ ಚಿತ್ರ ಗೀತೆಗಳನ್ನು, ರಾಗಗಳನ್ನು ನುಡಿಸಿದ ಕೃತಿಕಾ ಅತ್ಯಂತ ಪ್ರತಿಭಾವಂತಳಾಗಿದ್ದಾಳೆ ಎನ್ನುವದು ನೆರೆದ ಜನ ಆಕೆಗೆ ನೀಡಿದ ಪ್ರೋತ್ಸಾಹ ದಿಂದ ತಿಳಿಯಬಹುದು. ಆಕೆಯ ಕಲೆಗೆ ಮೆಚ್ಚಿ ಕೆಲವರು ಗೌರವ ಕಣಿಕೆ ನೀಡಿದ್ದಾರೆ.
ಇನ್ನೂಳಿದಂತೆ ವಿಕಿ ಹಾಗೂ ತಂಡದವರು ಚಿತ್ರ ಗೀತೆಗಳನ್ನು ಸಾದರ ಪಡಿಸಿದರು, ಪುಟ್ಟ ಪುಟಾಣಿಗಳು ತಮ್ಮ ಪ್ರತಿಭೆಗಳನ್ನು ಸಹ ಸಾದರಪಡಿಸಿದರು. ಶ್ರೀನಿಧಿ ವೀರಾಪುರ ಎಂಬ ಪುಟ್ಟ ಬಾಲಕಿ ನವಿಲು ನೃತ್ಯ ಮಾಡಿ ಜನ ಮೆಚ್ಚುಗೆ ಪಡೆದಳು. ನಚಿಕೇತ ದೊಡ್ಡಬಸವರಾಜ ಅನಿಸುತಿದೆ ಯಾಕೋ ಇಂದು..., ಗೀತೆಗೆ ಕೀ ಬೋರ್ಡ ವಾದನ ಮಾಡಿ ಶಬ್ಬಾಸ್ಗೀರಿ ಪಡೆದರು.
ನಗರಸಭೆ ಅಧ್ಯಕ್ಷ ಶ್ರೀಮತಿ ಜ್ಯೋತಿ ಭಜಂತ್ರಿ ಸೇರಿದಂತೆ ಸೇರಿದ್ದ ಮಕ್ಕಳೆಲ್ಲ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಂಧ ಕಲಾವಿದೆ ಕೃತಿಕಾಳಿಗೆ ಶರಣ ನೂಲಿಚಂದಯ್ಯ ಗ್ರಾಮೀಣ ಅಭಿವೃದ್ದಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಯೂರೋ ಕಿಡ್ಸ ಸೇರಿದಂತೆ ಹಲವಾರು ಸಂಸ್ಥೆಗಳು, ಗಣ್ಯರು ಕೃತಿಕಾಳಿಗೆ ಗೌರವ ಕಾಣಿಗೆ ಅಪರ್ಿಸಿದರು.

Friday, December 3, 2010

ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಅಂಗವಿಕಲರ ಸಾಮೂಹಿಕ ವಿವಾಹ

           ಬಾಗಲಕೋಟೆ 3- ಒಬ್ಬರಿಗೆ ಕಾಲಿಲ್ಲ, ಇನ್ನೂ ಕೆಲವರು ಅಂಧರು, ಇನ್ನೂ ಕೆಲವರು ನಡೆಯಲು ಬಾರದವರು, ಇವರ ಕೈ ಹಿಡಿದವರು ಸಾಮಾನ್ಯರು. ಜಾತಿ ಬೇಧವಷ್ಟೆ ಅಲ್ಲ ಧರ್ಮ ಭೇಧವೂ ಇರಲಿಲ್ಲ, ಮಾನವೀಯತೆ ಮೌಲ್ಯ ಇಲ್ಲಿ ಎದ್ದು ಕಾಣುತ್ತಿತ್ತು. ವಿಶ್ವ ಅಂಗವಿಕಲ ದಿನಾಚರಣೆಯ ನಿಮಿತ್ಯ ನಗರದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ಸಾಮೂಹಿಕ ವಿವಾಹದಲ್ಲಿನ ವೈಶಿಷ್ಠ್ಯ.
ಶಬರೀಶ ಅಂಗವಿಕಲರ ಕ್ಷೇಮಾಭಿವೃದ್ದಿ ಸಂಸ್ಥೆ, ಇಳಕಲ್ನ ಆಶಾದೀಪ ಸಂಗವಿಕಲರ ಸರ್ವ ಅಭಿವೃದ್ದಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ಸಾಮೂಹಿಕ ವಿವಾಹದಲ್ಲಿ ಸಾವಿವಾರು ಜನ ಆಗಮಿಸಿದ್ದರು. ಶ್ರೀಗಳ ಮಂತ್ರೋದ್ಘಾರ, ಮೌಲ್ವಿಗಳ ಉಪದೇಶದಡಿಯಲ್ಲಿ ನಡೆದ ಈ ಭಾವಪೂರ್ಣ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಅಂಗವಿಕಲರು, ವಧು ಅಂಗವಿಕಲೆಯಾದರೆ ವರ ಸಮಾನ್ಯ, ವರ ಅಂಗವಿಕಲೆಯಾದರೆ ವಧು ಸಾಮಾನ್ಯದವಳಾಗಿದ್ದಳು. ಆತ್ಮಬಲವನ್ನು ಜೊತೆಗಿಟ್ಟುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಜಿಲ್ಲೆಯ ನಾನಾಭಾಗಳಿಂದ ಮಾತ್ರವಲ್ಲದೆ ಪಾವಗಡ, ಕೋಲಾರ ಮತ್ತಿರಡೆಗಳಿಂದ ಆಗಮಿಸಿದ್ದ ಜೋಡಿಗಳು ಈ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಷ್ಟ್ರ ಪ್ರಶಸ್ತಿ ವಿಜೇತ ವಿಕಲಚೇತನ ಘನಶ್ಯಾಂ ಭಾಂಡಗೆಯವರ ನೇತೃತ್ವದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಇಳಕಲ್ ಗುರು ಮಹಾಂತ ಸ್ವಾಮಿಗಳು ಮಂತ್ರವನ್ನು ಉಪದೇಶಿಸಿದರು, ಸಂದರ್ಭಕ್ಕನುಸಾರವಾಗಿ ಅಶೋಕ ಕಲಬುಗರ್ಿ ವಚನಗಳನ್ನು ಸಾದರ ಪಡಿಸಿದರು.
ಮುಂಬೈ ಭಯೋತ್ಪಾದನೆಯಲ್ಲಿ ವೀರ ಮರಣಹೊಂದಿದ ಸಂದೀಪ ಉನ್ನಕೃಷ್ಣನ್ ತಂದೆ ಕೆ.ಉನ್ನಿಕೃಷ್ಣನ್, ತಾಯಿ ಧನಲಕ್ಷ್ಮೀಯವರು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದ ವಿಶೇಷವಾಗಿತ್ತು. 14 ಅಂಗವಿಕಲ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸರ್ವ ಧಮರ್ಿಯರು ಪಾಲ್ಗೊಂಡಿದ್ದರು. ಭಾವೈಕ್ಯತೆಯ ಸಂದೇಶ ಸಾರಿದ ಸಾಮೂಹಿಕ ವಿವಾಹದಲ್ಲಿ 8 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಹುಲಿಯಪ್ಪ ಕುರಿ ಜೊತೆ ರೇಣುಕಾ ಮುತಗಣ್ಣವರ, ಶಿವಪುತ್ರಪ್ಪ ಬಾಗಿ ಜೊತೆ ಲಕ್ಷ್ಮೀ ಪೂಜಾರಿ, ರುದ್ರಪ್ಪ ಅಡಿವೆಪ್ಪ ಜೊತೆ ಮಂಜುಳಾ ಪೂಜಾರಿ, ದಾನಯ್ಯ ಕಾಂಬಳೆಮಠ ಜೊತೆ ಶಾಂತಾ ಹಿರೇಮಠ, ಮಂಜುನಾಥ ಕಂಬಾರ ಜೊತೆ ಸುಮಕ್ಕಾ ಕುರಿಯವರ, ಮಂಜುನಾಥ ಸಾವಕಾರ ಜೊತೆ ಮಹಾದೇವಿ ಗಾಣಿಗೇರ, ಮಲ್ಲಪ್ಪ ಜಿಕ್ಕಣ್ಣವರ ಜೊತೆ ಲಾಯವ್ವ ನಂದ್ಯಾಳ, ಈಶ್ವರ ಕಿತ್ತಲಿ ಜೊತೆ ಗಂಗಮ್ಮಾ ನವಲಗುಂದ, ಶ್ರೀಶೈಲ ಕೊಲ್ಕಾರ ಜೊತೆ ಲಕ್ಷ್ಮೀಬಾಯಿ ಹಿರೇಮಠ, ಕುಮಾರ ಜಾಧವ ಜೊತೆ ಸಂಗೀತಾ ಪವಾರ, ರಾಮಾಂಜನೇಯ ದೊಡ್ಡಕರಿಯಪ್ಪ ಜೊತೆ ಶ್ಯಾಮಲಾ ಎಂ.ಎಸ್., ಮಹ್ಮದರಫೀಕ ಮುದ್ದೇಬಿಹಾಳ ಜೊತೆ ಶಂಶದಾಬೇಗಂ ಸೋಲ್ಲಾಪೂರ, ಸೈದುಸಾಬ ಕೆರೂರ ಜೊತೆ ಸೈನಾಜಬೇಗಂ ಬುಡ್ಡೇಸಿ, ಯಮನೂರಪ್ಪ ತಳವಾರ ಜೊತೆ ಈರಮ್ಮ ದಿದ್ದಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳಾಗಿದ್ದು ಶ್ರೀಗಳು, ಉನ್ನಿಕೃಷ್ಣನ್ ದಂಪತಿಗಳು, ಮಾಜಿ ಸಚಿವರು, ಗಣ್ಯರು ಸೇರಿದಂತೆ ಸಾವಿವಾರು ಜನರು ಆಶೀರ್ವದಿಸಿದರು.
ಇಳಕಲ್ ಚಿತ್ತರಗಿ ಸಂಸ್ಥಾನ ಮಠದ ಶ್ರೀ ಮಹಾಂತಸ್ವಾಮಿಗಳು ಅಧ್ಯಕ್ಷತೆ ವಹಿಸಿ ನವವಧುವರರಿಗೆ ಉಪದೇಶಿಸಿದರು. ಜೀವನದ ಸಾರವನ್ನು ಅಥರ್ೈಸಿಕೊಟ್ಟರು. ಚರಂತಿಮಠದ ಶ್ರೀ ಮ.ನಿ.ಪ್ರ ಪ್ರಭುಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಮಾತನಾಡಿ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಿ ಎಂದು ಸಲಹೆ ನೀಡಿದರು. ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಶಿರೂರಿನ ಡಾ.ಬಸವಲಿಂಗ ಮಹಾಸ್ವಾಮಿಗಳು, ಭೋವಿ ಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪ್ರಭುಲಿಂಗೇಶ್ವರ ಶುಗರ್ಸ ಅಧ್ಯಕ್ಷ ಜಗದೀಶ ಗುಡಗುಂಟಿ, ಮಾಜಿ ಸಚಿವ ಹುಲ್ಲಪ್ಪ ಮೇಟಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಶ್ರೀನಿವಾಸ ಬಳ್ಳಾರಿ, ವಿಜಾಪೂರದ ಎಂ.ಎಸ್.ಖೇಡ, ಡಾ.ಶ್ರೀಮತಿ ಅರುಣಾ ಅಕ್ಕಿ, ಶೀಮತಿ ಜಯಶ್ರೀ ಸಾಲಿಮಠ, ಎಸ್.ಎಸ್.ರೇಷ್ಮೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿದರ್ೇಶಕ ಎಸ್.ಎಚ್.ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಸಿದ್ದರಾಮ ಮನಹಳ್ಳಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆ.ಉನ್ನಿಕೃಷ್ಣನ್ ಹಾಗೂ ಶ್ರೀಮತಿ ಧನಲಕ್ಷ್ಮೀ ಉನ್ನಿಕೃಷ್ಣನ್ ಈ ಸಮಾರಂಭದ ಕೇಂದ್ರ ಬಿಂದುಗಳಾಗಿದ್ದರೂ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಘನಶ್ಯಾಂ ಭಾಂಡಗೆ ಅವರು ಮಾಡುತ್ತಿರುವ ಕಾರ್ಯ ಅಭೂತಪೂರ್ವವಾದದ್ದು, ನವ ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಬಾಳಿ ತಮ್ಮ ಮನೆಯನ್ನು ಬೆಳಗಿರಿ ಎಂದು ಶುಭಹಾರೈಸಿದರು.
ಶಬರೀಶ ಅಂಗವಿಕಲ ಕ್ಷೇಮಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಘನಶ್ಯಾಂ ಭಾಂಡಗೆ, ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ದಿ ಸಂಸ್ಥೆ ಅಧ್ಯಕ್ಷ ರಘು ಹುಬ್ಬಳ್ಳಿ, ಈ ಸಮಾರಂಭದ ಸಂಚಾಲಕ ಅನಂತ ಧೋಂಗಡಿ, ಸಹ ಸಂಚಾಲಕಿ ಶ್ರೀಮತಿ ಸ್ಪೂತರ್ಿ ಭಟ್ ನೇತೃತ್ವ ವಹಿಸಿದ್ದರು. ಮಹೆಬೂಬ ತೊಣಶ್ಯಾಳ, ಸುರೇಶ ತುಳಗೇರಿ, ದ್ಯಾಮಣ್ಣ ಬೆಲ್ಲದಡಿ, ಸಂಗಮೇಶ ಭಾವಿಕಟ್ಟಿ ಇವರ ಕೈ ಜೋಡಿಸಿದ್ದರು.
ಒಟ್ಟಾರೆಯಾಗಿ ಅದ್ದೂರಿ ಸಮಾರಂಭದಲ್ಲಿ ಅಂಗವಿಕಲರ ದಿನಾಚರಣೆಯಂದು 14 ವಿಕಲಚೇತನ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾವಿರಾರು ಜನರು ಆಶೀರ್ವದಿಸಿದರು.

Tuesday, November 30, 2010

ಹಾಸ್ಟೆಲ್ ನರಕಯಾತನೆ

        






         ಬಾಗಲಕೋಟೆ ; ಒಂದು ಕೊಣೆಯಲ್ಲಿ 8 ಜನರ ವಾಸ, ಮಲಗಲು ಕಾಟ್ ಸಹ ಇಲ್ಲ, ನೀರಿಗೆ ಹಾಹಾಕಾರ, ಅಡುಗೆಗೆ ಕೊಳೆತ ತರಕಾರಿ, ತಿನ್ನಲು ಹೇಸಿಗೆ ಅನ್ನಿಸುವಂತಹ ತಿಂಡಿ, ಊಟದಲ್ಲಿ ಹುಳಗಳು..., ಇದೇನು ಅಂತೀರಾ..., ಇದು ವಿದ್ಯಾಥರ್ಿಗಳ ವಸತಿ ನಿಲಯದ ಸ್ಥಿತಿ. ವಿದ್ಯಾಥರ್ಿಗಳ ಗೋಳಿಗೆ ಕೇಳುವವರು ಇಲ್ಲ, ಅಧಿಕಾರಿಗಳಿಗೆ ಹೇಳುವವರು ಇಲ್ಲ.
ನವನಗರದ 45 ನೇ ಸೆಕ್ಟರ್ನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಾದರಿ ಸಾರ್ವಜನಿಕ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಸಂಪೂರ್ಣವಾಗಿ ವಿದ್ಯಾಥರ್ಿಗಳ ಪಾಲಿಗೆ ನರಕವಾಗಿದೆ, ವಿದ್ಯಾಥರ್ಿಗಳ ಈ ನರಕ ಯಾತನೆಗೆ ಸ್ಪಂದಿಸುವವರು ಯಾರೂ ದಿಕ್ಕಿಲ್ಲ, ಅಲ್ಲಿಯ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ವಿದ್ಯಾಥರ್ಿಗಳ ಓದಿನ ಜೊತೆಗೆ ಆರೋಗ್ಯದ ಬಗ್ಗೆ ಲಕ್ಷ ವಹಿಸುವವರು ಯಾರೂ ಇಲ್ಲ.
ಈ ವಸತಿ ನಿಲಯ 100 ವಿದ್ಯಾಥರ್ಿಗಳ ಅರ್ಹತೆಯುಳ್ಳದ್ದು, ಆದರೆ ಇಲ್ಲಿ ವಾಸಿಸಲು ಕೇವಲ 8 ಕೊಣೆಗಳು ಮಾತ್ರ, ಪ್ರತಿಯೊಂದು ಕೊಣೆಯಲ್ಲಿ 8 ಜನ ವಿದ್ಯಾಥರ್ಿಗಳು ವಾಸಿಸುತ್ತಿದ್ದಾರೆ. ಉಳಿದ 20 ವಿದ್ಯಾಥರ್ಿಗಳು ಕೇವಲ ಉಟಕ್ಕೆ ಮಾತ್ರ ಅಲ್ಲಿ ಬಂದು ವಸತಿ ಬೇರೆಡೆ ಮಾಡುತ್ತಿದ್ದಾರೆ. ಚಿಕ್ಕ ಚಿಕ್ಕ ಕೊಣೆಯಲ್ಲಿ 8 ವಿದ್ಯಾಥರ್ಿಗಳು ವಾಸಿಸುತ್ತಿದ್ದು ಸರಿಯಾಗಿ ಮಲಗಲು ಸಹ ಸಾಧ್ಯವಿಲ್ಲ, ಇನ್ನೂ ಓದುವದಂತೂ ಕನಸಿನ ಮಾತು.
45 ನೇ ಸೆಕ್ಟರ್ನಲ್ಲಿ ಇರುವ ಈ ವಸತಿ ನಿಲಯದ ಹತ್ತಿರ ಸರಿಯಾದ ಬಸ್ ನಿಲ್ದಾಣವೂ ಇಲ್ಲ, ಕಾಲೇಜ್ಗೆ ಹೋಗುವ ಸಮಯದಲ್ಲಿ ಬಸ್ ಇಲ್ಲ, ವಸತಿನಿಲಯದಿಂದ ಎರಡುವರೆ ಕಿಲೋಮಿಟರ್ ದೂರ ಚಲಿಸಿ ಅಲ್ಲಿಂದ ಬಸ್ ಹಿಡಿದು ಕಾಲೇಜ್ಗೆ ಹೋಗಬೇಕು. ನಿತ್ಯ ಬೆಳಿಗ್ಗೆ ಎದ್ದು ತಕ್ಷಣ ಮೊದಲ ಕೆಲಸ ಶೌಚಾಲಯಕ್ಕೆ ಪಾಳೆ ಹಚ್ಚೋದು, ನಂತರ ಸ್ನಾನ ಮಾಡಲು ಕ್ಯೂನಲ್ಲಿ ನಿಲ್ಲಬೇಕು, ಕೊನೆಯ ವಿದ್ಯಾಥರ್ಿ ಸ್ನಾನ ಮಾಡಿ ಬರೋದರಲ್ಲಿ ತಿಂಡಿಯ ಸಮಯ ಮುಗಿದಿರುತ್ತದೆ, ಸ್ವಲ್ಪ ತಡವಾದರೂ ತಿಂಡಿ ಇಲ್ಲ ಅಂತ ಬೆದರಿಸಿ ಕಳುಹಿಸುತ್ತಾರೆ, ಎಲ್ಲ ವಿದ್ಯಾಥರ್ಿಗಳ ತಯಾರಾಗುವಷ್ಟರಲ್ಲಿ ಸಮಯ 10 ಕ್ಕೆ ಬಂದು ನಿಂತಿರುತ್ತದೆ, ಎರಡುವರೆ ಕಿಲೋಮಿಟರ್ ಚಲಿಸಿ ಬಸ್ ಹಿಡಿದು ಕಾಲೇಜ ಮುಟ್ಟುವಷ್ಟರಲ್ಲಿ ಕಾಲೇಜಿನ ಅರ್ಧ ಸಮಯ ಮುಗಿದಿರುತ್ತದೆ.
ಇದು ಬೆಳಗಿನ ಕಷ್ಟವಾದರೆ ಇನ್ನೂ ರಾತ್ರಿ ಮಾಡುವ ಊಟ ಸಂಜೆ 7 ಗಂಟೆಯಿಂದ ಪ್ರಾರಂಭವಾಗಿ 8 ಗಂಟೆಗೆ ಪ್ರಾರಂಭಿಸಿ ಒಂದು ಗಂಟೆಯ ಅವಧಿಯ ನಂತರ ಬಂದ ವಿದ್ಯಾಥರ್ಿಗಳಿಗೆ ಊಟ ಇಲ್ಲವೇಇಲ್ಲ, ಸಿಬ್ಬಂದಿಗಳು ಮನೆಗೆ ಹೋಗುವ ಗಡಿಬಿಡಿಯಲ್ಲಿ ರಾತ್ರಿ ಮಾಡುವ ಊಟವನ್ನು ಸಂಜೆ 8 ಗಂಟೆಗೆ ಮುಗಿಸಿಬಿಡುತ್ತಾರೆ. ಇದು ನಿತ್ಯದ ತಂದರೆ.
ಇನ್ನೂ ಊಟ ಹಾಗೂ ತಿಂಡಿ ವಿಷಯದಲ್ಲಿ, ತನ್ನಲಸಾಧ್ಯವಾದ ತಿಂಡಿ, ಉಪ್ಪು ಖಾರವಿಲ್ಲದ ಊಟ, ಬಾಳಹುಳಗಳು ಇದರಲ್ಲಿ ರಾರಾಜಿಸುತ್ತಿರುತ್ತವೆ. ಇಂದು ಮಧ್ಯಾಹ್ನ ಈ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಊಟಕ್ಕೆ ಹುಗ್ಗಿ ತಯಾರಿಸಲಾಗಿತ್ತು. ಹುಗ್ಗಿಯಲ್ಲಿ ಬಾಳಹುಳುಗಳು ಕಂಡುಬಂದವು, ಇದನ್ನೆ ತಿಂದ ವಿದ್ಯಾಥರ್ಿಗಳು ನಮಗೆ ಇದು ರೂಢಿಯಾಗಿದೆ ಎಂದು ದುಖಃದಿಂದ ಹೇಳುತ್ತಾರೆ. ತರಕಾರಿಯಂತೂ ನೋಡಲು ಸಾಧ್ಯವಿಲ್ಲ, ಪ್ರಾಣಿಗಳು ಸಹ ಮುಟ್ಟದ ಈ ತರಕಾರಿಗಳನ್ನು ವಿದ್ಯಾಥರ್ಿಗಳು ಮಾಡುವ ಊಟ ತಯಾರಿಸಲು ಉಪಯೋಗಿಸುತ್ತಾರೆ. ಸ್ಟೋರ್ ರೂಂ ಪ್ರವೇಶಿಸುತ್ತಿರುವಂತೆ ಕೊಳೆತ ತರಕಾರಿಯ ಗಬ್ಬು ವಾಸನೆ, ಅಕ್ಕಿ, ಬೇಳೆಗಳನ್ನು, ಇಡ್ಲಿ ರವಾ ಸಹ ಇಲ್ಲಿ ಸಂಗ್ರಹಿಸಿ ಇಡಲಾಗಿದೆ. ಚೀಲದಲ್ಲಿದ್ದ ಇಡ್ಲಿ ರವೆಯನ್ನು ಕೈ ಹಾಕಿ ಹೊರ ತಗೆದು ನೋಡಿದರೆ ಕೈ ತುಂಬ ನೂಸಿಗಳು ಹರಿದಾಡಿದವು. ಸ್ನಾನಕ್ಕೆ ಇಲ್ಲಿ ಬಿಸಿ ನೀರಿನ ವ್ಯವಸ್ಥೆ ಇಲ್ಲ, ಕುಡಿಯುಲು ನೀರು ಕೇವಲ ಒಂದು ಡ್ರಮ್, ನೀರು ಖಾಲಿಯಾದರೆ ಕೆಲ ಸಮಯದಲ್ಲಿ ತುಂಬುವವರು ಗತಿ ಇರೋದಿಲ್ಲ.
ಇದನ್ನೆಲ್ಲ ಓದಿದ ನಿಮಗೆ ಇದು ನರಕ ಯಾತನೆ ಅನ್ನಿಸದೇ ಇರುತ್ತಾ...? ನಿತ್ಯ ಈ ವಿದ್ಯಾಥರ್ಿಗಳು ಈ ವಿಷಯಗಳ ಬಗ್ಗೆ ವಾರ್ಡನ್ ಅವರ ಗಮನ ಸೆಳೆಯುತ್ತಾರೆ, ತಿಂಗಳಿಗೊಮ್ಮೆ ಬರುವ ಅಧಿಕಾರಿಗಳ ಗಮನ ಕೂಡ ಸೆಳೆಯುತ್ತಾರೆ ಆದರೆ ಇದು ಅವರಿಗೆ ನರಕ ಯಾತನೆ ಅಂತ ಇನ್ನೂ ತಿಳಿದುಬಂದಿಲ್ಲ, ಇಲ್ಲದಿದ್ದರೆ ಇದನ್ನು ಸರಿಪಡಿಸುತ್ತಿದ್ದರೋ ಗೋತ್ತಿಲ್ಲ. ವಿದ್ಯಾಥರ್ಿಗಳು ಮೂಖ ಅಜರ್ಿಗಳನ್ನು ಸಹ ಅಧಿಕಾರಿಗಳಿಗೆ ಬರೆದಿದ್ದಾರೆ. ಆ ಪತ್ರದಲ್ಲಿ ವಿದ್ಯಾಥರ್ಿಗಳಿಗೆ ಸರಿಯಾಗಿ ಊಟ ನೀಡದೆ ಇರುವುದು ಸರಿಯಲ್ಲ, ನಮಗೂ ಕಾನೂನು ಗೊತ್ತು, ನಮಗೆ ನಮ್ಮದೆ ಆದ ಹಕ್ಕು ಇದೆ, ಲೋಕಾಯುಕ್ತ ಕೂಡ ಇದೆ ಎಂದೆಲ್ಲ ಬೆದರಿಕೆ ನೀಡಿದರೂ ಸಹ ಇದಕ್ಕೂ ಬಗ್ಗೆದ ಅಧಿಕಾರಿಗಳು ಈ ವರೆಗೂ ವಿದ್ಯಾಥರ್ಿಗಳ ಸಮಸ್ಯೆಗೆ ಸ್ಪಂದಿಸಿಲ್ಲ.
ಇಷ್ಟಕ್ಕೆ ಮುಗಿಲಿಲ್ಲ ಈ ಹಾಸ್ಟೇಲ್ ಅವಾಂತರ, ಈ ವಸತಿ ನಿಲಯದ ಕಟ್ಟಡ ನಗರಸಭೆಗೆ ಸಂಬಂಧ ಪಟ್ಟಿದ್ದು, ಅದೂ ಕೂಡ ಎಸ್.ಎಫ್.ಸಿ ಅನುದಾನದಡಿಯಲ್ಲಿ ಪರಿಶಿಷ್ಠ ಜಾತಿ-ಪರಿಶಿಷ್ಠ ಪಂಗಡದ ವಿದ್ಯಾಥರ್ಿಗಳ ವಸತಿ ನಿಲಯದ ಕಟ್ಟಡ, ಆ ಕಟ್ಟಡದಲ್ಲಿಯೇ ಬಿ.ಎಸ್.ಎಂ. ಹಾಸ್ಟೇಲ್. ಹಾಗಾದರೆ ಎಸ್.ಸಿ.-ಎಸ್.ಟಿ. ವಿದ್ಯಾಥರ್ಿಗಳಿಗೆ ವಸತಿ ನಿಲಯ  ಎಲ್ಲಿದೆ ಎನ್ನುವ ಪ್ರಶ್ನೆ ಕಾಡದೆ ಇರುತ್ತಾ...? ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಯಾವಾಗ ಎಂದು ಪ್ರಶ್ನಿಸುವವರು ಯಾರೂ ಇಲ್ಲ. ಇದರತ್ತ ಗಮನವಹಿಸಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವವರು ಯಾರೂ ಇಲ್ಲ.
ವಿದ್ಯಾಥರ್ಿಗಳು ಮುಂದಿನ ಪ್ರಜ್ಞಾವಂತ ನಾಗರಿಕರು ಆಗಬೇಕು ಎಂದೆಲ್ಲ ಭಾಷಣ ಬಿಗಿಯುವ ಸಕರ್ಾರ ಇತ್ತ ಗಮನವಹಿಸಲಿ, ಈ ಸಮಸ್ಯೆಗೆ ಸ್ಪಂದಿಸಲಿ. ಸಂಬಂಧಪಟ್ಟವರಿಗೆ ಈ ಸಮಸ್ಯೆಗಳ ಗಮನ ಸೆಳೆದರೂ ಈ ವರೆಗೂ ಸ್ಪಂದಿಸಿಲ್ಲ. ಜಿಲ್ಲಾಧಿಕಾರಿಗಳೇ ಈ ಸಮಸ್ಯೆಗಳಿಗೆ ಮುಕ್ತಿ ಕಾಣಿಸಬೇಕಾಗಿದೆ.

ಭಾಸ್ಕರ ಮನಗೂಳಿ.  

"ವಿಶ್ವ ಏಡ್ಸ ದಿನಾಚರಣೆಯ ಅಂಗವಾಗಿ ವಿಶೇಷ ವರದಿ"



ಬಾಗಲಕೋಟೆ 30- ನಕ್ಕು ನಲಿದಾಡಿ, ಎಲ್ಲರ ಜೊತೆ ಬೆರೆತು ತಾಯಿಯ ವಾತ್ಸಲ್ಯ ಪಡೆದು, ತಂದೆಯ ಪೋಷಣೆಯಲ್ಲಿ ಸುಖವಾಗಿ ಮಕ್ಕಳು ಬೆಳೆಯಬೇಕು ಅಲ್ವಾ..., ಆದರೆ ಇಲ್ಲಿದೆ ನೋಡಿ ಒಂದು ವಿಶಿಷ್ಠ ವರದಿ, ಈ ಮಕ್ಕಳಿಗೆ ತಾಯಿ ವಾತ್ಸಲ್ಯ ತಂದೆಯ ಪೋಷಣೆ ಎರಡು ಸಿಕ್ಕಿದೆ, ಎಲ್ಲರ ಜೊತೆ ಬೆರೆಯಲೂ ಅವಕಾಶ ಸಿಕ್ಕಿದೆ ಆದರೆ ಜವರಾಯ ಸದಾ ಇವರ ಬೆನ್ನಹಿಂದಯೇ ಜೋತು ಬಿದ್ದುರುತ್ತಾನೆ, ಹೈದಯ ಮೀಡಿತ ಕೈಯಲ್ಲಿ ಹಿಡುದು ನಕ್ಕು ನಲಿದಾಡಿ ಜೀವನ ಸಾಗಿಸುತ್ತಿದ್ದಾರೆ. ನೀರು ಮೇಲಿನ ಗುಳ್ಳಿಯಂತೆ ಇರುವ ಇವರ ಜೀವನ ಆದರೂ ಇವರಿಗೆದೆ ಆತ್ಮಸ್ಥೈರ್ಯ, ಆತ್ಮಬಲ ಸದಾ ಇವರ ಜೊತೆ ಇದೆ. ಸಮುದಾಯ ಇವರ ಜೊತೆ ಇದೆ ಆದರೆ ಸಕರ್ಾರ ಇಲ್ಲ.
ಭಾರತದಲ್ಲಿಯೇ ಎಚ್.ಐ.ವ್ಹಿ ಸೋಂಕಿತರ ಪಟ್ಟಿಯಲ್ಲಿ 2 ನೇ ಸ್ಥಾನ ಪಡೆದಿರುವ ಬಾಗಲಕೋಟೆ ರಾಜ್ಯದ ಪಟ್ಟಿಯಲ್ಲಿ ಮುಧೋಳ ಹಾಗೂ ಜಮಖಂಡಿ ತಾಲೂಕು ಮೊದಲನೇ ಸ್ಥಾನದಲ್ಲಿವೆ. ಯಾರೋ ಮಾಡಿದ ತಪ್ಪಿಗೆ ಜೀವನದುದ್ದಕ್ಕೂ ನರಳುತ ಜೀವ ಸಾಗಿಸುತ್ತಿರುವವರು ಎಚ್.ಐ.ವ್ಹಿ ಸೋಂಕಿತರ ಮಕ್ಕಳು, ಪಾಲಕರು ಪಡುವ ಕ್ಷಣಿಕ ಸುಖಕ್ಕೆ ಬಲಿಯಾಗುವವರು ಅವರಿಗೆ ಹುಟ್ಟುವ ಮಕ್ಕಳು, ಆ ಮಕ್ಕಳಿಗೆ ಸೋಂಕು ತಗುಳಿ ಬಲಿಯಾದವರು ಸಾಕಷ್ಟು ಆದರೆ ಆ ಮಕ್ಕಳ ಆರೈಕೆಯೇ ನಮ್ಮ ಧ್ಯೇಯ ಎಂಬ ಹೆಮ್ಮೆಯ ಗುರಿಯನ್ನಿಟ್ಟುಕೊಂಡು ಜಮಖಂಡಿ ತಾಲೂಕಿನ ಮುತ್ತೂರು ಪುನರ್ವಸತಿ ಕೇಂದ್ರದಲ್ಲಿ ಒಂದು ಅತ್ಯುತ್ತಮ ಕಾರ್ಯ ನಡೆದಿದೆ.
ಬಿಜಾಪೂರಿನ ಉಜ್ವಲಾ ಗ್ರಾಮೀಣ ಅಭಿವೃದ್ದಿ ಸೇವಾ ಸಂಸ್ಥೆ ಎಚ್.ಐ.ವ್ಹಿ ಸೋಂಕಿತ ಮಕ್ಕಳಿಗೆ ತಾಯಿಯ ವಾತ್ಸಲ್ಯ ಹಾಗೂ ತಂದೆಯ ಪೋಷಣೆ ಎರಡು ನೀಡುತ್ತಿದೆ ಆದರೆ ಸಕರ್ಾರ ಈವರೆಗೂ ಇತ್ತ ಲಕ್ಷವಹಿಸಿಲ್ಲ. ಆದರೆ ಸಕರ್ಾರಿ ಅಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಇವರ ಬೆನ್ನಲುಬು ಎಂಬುದು ಮಾತ್ರ ಅಷ್ಟೆ ಸತ್ಯ. ಮಾಯೆಯ ಹಾಗೆ ಮನೆ ಬಾಗಿಲು ಬಡೆದು ಮನೆ ಸೇರಿಕೊಳ್ಳುವ ಈ ರೋಗ ಪ್ರಾರಂಭವಾಗುವ ಮೊದಲು ಕ್ಷಣಿಕ ಸುಖ ನೀಡಿದರೆ ಇಡೀ ಜೀವನ ನರಕಯಾತನೆ. ಆ ನರಕಯಾತನೆಗೆ ಬಲಿಯಾಗುವವದು ಕ್ಷಣಿಕ ಸುಖಪಟ್ಟವರು ಮಾತ್ರ ಅಲ್ಲ ಅವರಿಗೆ ಹುಟ್ಟುವ ಮಕ್ಕಳು ಕೂಡ. ಆ ನರಕಯಾತನೆಯಿಂದ ಮಕ್ಕಳನ್ನು ಹೊರ ತಂದು ಹೊಸ ಜಗತ್ತನ್ನು ಸೃಷ್ಠಿಸಿ ಎಲ್ಲರ ಜೊತೆ ಬೆರೆಯಲು, ಯಾರಿಗೂ ಕಮ್ಮಿ ಇಲ್ಲದ ಹಾಗೆ ಬೆಳೆಯುತ್ತಿರುವ ಮಕ್ಕಳು ಅತ್ಯಂತ ಪ್ರತಿಭಾವಂತರು.
ಇದು ನಮ್ಮ ಮಕ್ಕಳ ಧಾಮ, ನಮ್ಮ ಮಕ್ಕಳ ಧಾಮ ಎಚ್.ಐ.ವ್ಹಿ ಸೋಂಕಿತ ಮಕ್ಕಳ ಆಶ್ರಯ ತಾಣ ಮಾತ್ರ ಅಲ್ಲ ಅವರ ಬಾಳಿಗೆ ಒಂದು ಬೆಳಕು ನೀಡಿ ಪ್ರಜ್ವಲಿತ ಜ್ಯೋತಿಯಂತೆ ಬೆಳೆಸಿ ಉಜ್ವಲ ಭವಿಷ್ಯ ಕಲ್ಪಿಸಿಕೊಡಲು ಪ್ರಯತ್ನ ಮಾಡುತ್ತಿದೆ. ಬಿಜಾಪೂರ, ಬಾಗಲಕೋಟೆ, ಬಳ್ಳಾರಿ ಸೇರಿದಂತೆ ವಿವಿಧೆಡೆಯಿಂದ ಎಚ್.ಐ.ವ್ಹಿ ಸೋಂಕಿತ ಒಟ್ಟು 29 ಮಕ್ಕಳಿಗೆ ಇದು ಆಶ್ರಯ ಧಾಮವಾಗಿದೆ. 8 ಬಾಲಕಿಯರು, 21 ಬಾಲಕರು ಆಶ್ರಯ ಪಡೆಯುತ್ತಿರುವ ಈ ಧಾಮದಲ್ಲಿ ಅವರ ಆರೈಕೆ, ವಿದ್ಯಾಭ್ಯಾಸ, ನಿತ್ಯ  ಔಷಧೋಪಚಾರ, ಎಲ್ಲವೂ ನಡೆಯುತ್ತಿದೆ. ಈ ಮಕ್ಕಳು ಯಾರಿಗೂ ಕಮ್ಮಿ ಇಲ್ಲ, ಇವರಲ್ಲಿರುವ ಪ್ರತಿಭೆ ಸಾಮಾನ್ಯ ಮಕ್ಕಳಿಗಿಂತಲೂ ಒಂದು ಕೈ ಜಾಸ್ತಿ, ನಿತ್ಯ ಬೆಳಿಗ್ಗೆ ಎದ್ದು ಯೋಗ, ವ್ಯಾಯಾಮ ಮಾಡುವ ಈ ಮಕ್ಕಳು ತಿಂಡಿ ಮುಗಿಸಿಕೊಂಡು ಶಾಲೆಗೆ ತೆರಳುತ್ತಾರೆ, ಸಮೀಪದ ಆಳಬಾಳ ಗ್ರಾಮದ ಸಕರ್ಾರಿ ಶಾಲೆಯಲ್ಲಿ ಅಭ್ಯಸಿಸುತ್ತಿರುವ ಈ ಮಕ್ಳಳು ಓದಿನಲ್ಲಿ ಸದಾ ಮುಂದೆ ಇದ್ದಾರೆ. ಬೀದಿ ನಟಕಗಳನ್ನು ತಾವೇ ಸ್ವತಃ ರಚಿಸಿ ಅಭಿನಯಿಸಿದ್ದಾರೆ. "ನೀವೆಲ್ಲಾ ಇರುವಾಗ ನಾವೇಕೆ ಅನಾಥರು" ಎಂಬ ನಾಟಕ ಅತ್ಯಂತ ಕರುಣಾಜನಕವಾಗಿದ್ದು ಇವರ ಜೀವನ ನೈಜತೆಯನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.
ಆಶ್ರಯ ಧಾಮದ ಸುತ್ತ ಜಾಲಿ ಬೆಳೆದಿದ್ದನ್ನು ಸ್ವತಃ ಸ್ವಚ್ಚುಗೊಳಿಸಿ ಕೈತೋಟ ನಿಮರ್ಿಸಿದ್ದಾರೆ, ನಿತ್ಯ ಬೇಕಾಗುವ ತರಕಾರಿಗಳನ್ನು ಅಲ್ಲಿಯೇ ಬೆಳೆಯುತ್ತಾರೆ. ತಾವೇ ಒಂದು ಸಮಿತಿಯನ್ನು ರಚಿಸಿಕೊಂಡು ಆ ಸಮಿತಿಯ ಮುಖಂಡ ಎಲ್ಲ ಮಕ್ಕಳು ಔಷಧಿ ತೆಗೆದುಕೊಳ್ಳುವ ನಂತರ ಅವನು ಸೇವಿಸುತ್ತಾನೆ, ವಾರಕ್ಕೊಮ್ಮೆ ಸಭೆ ನಡೆಸಿ ಆಗಿರುವ ಕಾರ್ಯಗಳು ಹಾಗೂ ಆಗಬೇಕಾದ ಕಾರ್ಯಗಳ ಬಗ್ಗೆ ಚಚರ್ಿಸುತ್ತಾರೆ, ಮಕ್ಕಳು ಇಷ್ಟಲ್ಲ ಮಾಡಬಲ್ಲರು ಎಂದ ಮೇಲೆ ಇವರು ಸಾಮಾನ್ಯರು ಎಂದು ಅನ್ನಿಸಲ್ಲ. ಆ ಸಮಿತಿಯ ಮುಖ್ಯಸ್ಥ ಈ ಮಕ್ಕಳಿಗೆಲ್ಲ ಆಪ್ತಮಿತ್ರನಂತೆ, ಆಪ್ತಮಿತ್ರ ಎನ್ನುವ ಒಂದು ಡಬ್ಬಿ ಇಟ್ಟು ಅದರಲ್ಲಿ ದೂರುಗಳನ್ನು ಬರೆದು ಹಾಕಲಾಗುತ್ತದೆ, ಆ ದೂರುಗಳನ್ನು ಸರಿಯಾಗಿ ಪರಿಶೀಲಿಸಿ ಮುಖ್ಯಸ್ಥ ಆ ಧಾಮದ ವ್ಯವಸ್ಥಾಪಕರಿಗೆ ಮನವರಿಕೆ ಮಾಡುತ್ತಾರೆ. ಇವರಲ್ಲಿರುವ ಪ್ರತಿಭೆ ಸಾಮಾನ್ಯವಾದದ್ದಲ್ಲ, ಬೀದಿ ನಾಟಕಗಳನ್ನು ರಚಿಸಿ ತಾವೇ ಸ್ವತಃ ಅಭಿನಯಿಸಿ ರಂಜಿಸಿಕೊಳ್ಳುತ್ತಾರೆ. ಬೀಡುವಿಲ್ಲದೆ ತಮ್ಮದೆ ಆದ ಕೆಲಸ ಕಾರ್ಯಗಳಲ್ಲಿ ಸದಾ ಮಗ್ನರಾಗಿರುವ ಈ ಮಕ್ಕಳಿಗೆ ಎಚ್.ಐ.ವ್ಹಿಯ ನೆನಪು ಸಹ ಇರೋದಿಲ್ಲ.
ಇಂತಹ ಮಕ್ಕಳಿಗೆ ಸಮುದಾಯ ಪಾಲನೆ ನೀಡುತ್ತಿದ್ದರೆ ಸಕರ್ಾರ ಇತ್ತ ಇನ್ನೂ ಲಕ್ಷವಹಿಸಿಲ್ಲ ಎನ್ನುವರು ಸುತ್ತ ಮುತ್ತಲಿನ ಗ್ರಾಮಸ್ಥರ ದೂರು. ಸಮೀಪದ ಆಳಬಾಳದ ಹಾಲು ಒಕ್ಕೂಟದವರು ವಾರಕ್ಕೆ 24 ಲೀ. ಹಾಲು ನೀಡುತ್ತಾರೆ, ಜಮಖಂಡಿ ಉಪವಿಭಾಗಾಧಿಕಾರಿ ಕ್ಯಾಪ್ಟನ ರಾಜೇಂದ್ರ ಇವರ ಗಾಡ್ ಪಾಧರ್ ಎನ್ನುವದರಲ್ಲಿ ಸಂಶಯವಿಲ್ಲ. ಇವರಿಗೆ ಎಲ್.ಪಿ. ಗ್ಯಾಸ, ಸ್ಟೋವ್, ಪಾತ್ರೆಗಳನ್ನು ಪ್ರಾರಂಭದ ಹಂತದಲ್ಲಿಯೇ ನೀಡಿದ್ದಾರೆ. ಇವರ ಜೊತೆ ಜಮಖಂಡಿ ತಹಶೀಲ್ದಾರ ಸಿದ್ದು ಕುಲ್ಲೋಳ್ಳಿ ಅವರೂ ಸಹ ಕೈ ಜೋಡಿಸಿದ್ದಾರೆ. ತಹಶೀಲ್ ಕಚೇರಿ ಹಾಗೂ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಎಲ್ಲ ಸಿಬ್ಬಂದಿ ತಿಂಗಳಿಗೊಮ್ಮೆ ಒಂದು ದಿನದ ವೇತನವನ್ನು ಇಲ್ಲಿ ದೇಣಿಗೆಯಾಗಿ ನೀಡುತ್ತಾರೆ. ಒಟ್ಟು 47,500 ರೂ. ಈ ಆಶ್ರಯ ಧಾಮದ ಮಕ್ಕಳ ಆರೈಕೆಗೆ ನೀಡಲಾಗುತ್ತದೆ. ರೋಟರಿ ಸೇರಿದಂತೆ ಹಲವಾರು ಸೇವಾ ಸಂಸ್ಥೆಗಳ ಸದಾ ಇವರ ಸಹಾಯದಲ್ಲಿರುತ್ತವೆ. ಸುತ್ತಮುತ್ತಲಿನ ಗ್ರಾಮಸ್ಥರೂ ಇವರ ತಮ್ಮ ಮಕ್ಕಳಂತೆ ಆರೈಕೆ ನೀಡುತ್ತಾರೆ, ಡಾ.ಎಚ್.ಜಿ.ದಡ್ಡಿ, ಡಾ.ಉದಪುಡಿ ಈ ಮಕ್ಕಳಿಗೆ ಪುಕ್ಕಟೆಯಾಗಿ ಆರೈಕೆ ನೀಡುತ್ತಿದ್ದಾರೆ. ಜಮಖಂಡಿ ತಾಲೂಕಿನ ಗ್ರಾಮ ಆರೋಗ್ಯ ಸಮಿತಿಗಳ ಒಕ್ಕೂಟ ಒಂದು ಲಕ್ಷ ರೂ. ಸಹಾಯ ಧನ ನೀಡಿದೆ. ಈ ಆಶ್ರಮ ಧಾಮದ ಸಂಪೂರ್ಣ ಜವಾಬ್ದಾರಿ ಉಜ್ವಲಾ ಸಂಸ್ಥೆಯ ನಿದರ್ೇಶಕ ವಾಸುದೇವ ತೋಳಬಂದಿ ದಂಪತಿಗಳು ನಿರ್ವಹಿಸುತ್ತಿದ್ದಾರೆ. ಸದಾ ಈ ಮಕ್ಕಳ ಜೊತೆ ಬೆರೆಯುವ ವಾಸುದೇವ ಹಾಗೂ ಸುನಂದಾ ಅವರು ತಮ್ಮ ಮಕ್ಕಳಂತೆ ಆರೈಕೆ ನೀಡುತ್ತಿದ್ದಾರೆ.
ಒಟ್ಟು 6 ಜನ ಸಿಬ್ಬಂದಿಯುಳ್ಳ ಈ ಧಾಮಕ್ಕೆ ಸಕರ್ಾರ ಈ ವರೆಗೂ ಸಹಾಯಹಸ್ತ ತೋರಿಲ್ಲ, ಕನರ್ಾಟಕ ರಾಜ್ಯ ಏಡ್ಸ ನಿಯಂತ್ರಣ ಮಂಡಳಿ ಈ ಮಕ್ಳಳ ಸಹಾಯಕ್ಕೆ ಮುಂದೆ ಬರಬೇಕಾಗಿದೆ, ಈ ಧಾಮದ ಮಕ್ಕಳಿಗೆ ಎಷ್ಟೆ ಸಹಾಯ ಮಾಡಿದರೂ ಸಾಲದು, ಸ್ವಯಂ ಸೇವಾ ಸಂಸ್ಥೆಗಳು, ಅಧಿಕಾರಿಗಳಾಗಲಿ ಧನ ಸಹಾಯ ನೀಡಿದರೂ ಸಹ ಅದು ಕೇವಲ ಕೆಲವೇ ದಿನಗಳದ್ದೂ, ತಾತ್ಕಾಲಿಕ ಹಾಗೂ ತಕ್ಕಮಟ್ಟಿಗೆ ಸಹಾಯದೊರಕುತ್ತಿರುವ ಈ ಮಕ್ಕಳಿಗೆ ಶಾಶ್ವತವಾದ ಸಹಾಯಬೇಕಾಗಿದೆ, ಅದಕ್ಕೆ ಸಕರ್ಾರ ಮುಂದಾಗಬೇಕಾಗಿದೆ. ವಿಶ್ವ ಏಡ್ಸ ದಿನಾಚರಣೆಯಾದ ಇಂದು ಸಕರ್ಾರ ನಮಗೆ ಶಾಶ್ವತ ನೆರಳಾಗಬಹುದಾ ಎನ್ನುವ ಪ್ರಶ್ನೆ ಇಟ್ಟುಕೊಂಡು ಉತ್ತರಕ್ಕಾಗಿ ಜಾತಕಪಕ್ಷಿಯಂತೆ ಮಕ್ಕಳು ಕಾಯುತ್ತಿದ್ದಾರೆ.

ಭಾಸ್ಕರ ಮನಗೂಳಿ