Tuesday, February 1, 2011

ಕಥಕ್ ನೃತ್ಯ ಖ್ಯಾತಿಯ ಶರ್ವರಿ ಜೆಮಿನಿಸ್ ನೃತ್ಯ


                                                   ಕಥಕ್ ನೃತ್ಯ ಖ್ಯಾತಿಯ ಶರ್ವರಿ ಜೆಮಿನಿಸ್ ನೃತ್ಯ 

  ಬಾಗಲಕೋಟೆ : ಹೆಜ್ಜೆ ಗೆಜ್ಜೆ ನಾದದ ವಿಶೇಷತೆ ಹೊಂದಿರುವ ನೃತ್ಯ ಪ್ರದರ್ಶನದಲ್ಲಿ ಹೆಜ್ಜೆ ಗೆಜ್ಜೆಗಳ ನಾದ ಮೊಳಗಿದಂತೆ ಕರತಾಡನದ ಅಬ್ಬರ ಶತಾಬ್ದಿ ಭವನವನ್ನು ಅಲಂಕರಿಸಿತ್ತು, ಗೋವರ್ಧನ ಗಿರಿಯ ಕಥೆಯ ವಿಶ್ಲೇಷಣೆ ನೃತ್ಯದಲ್ಲಿ ಮೂಡಿಬಂದು ಗೋವರ್ಧನ ಉದ್ದಾರವಾದ ಪ್ರಸಂಗ ವೀಕ್ಷಕರ ಮನಃಸೆಳೆಯಿತು.
ತಿಳಿಬೆಳದಿಂಗಳ ಮಧ್ಯೆ ಬಿ.ವ್ಹಿ.ವ್ಹಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಅಮೆರಿಕ ಖ್ಯಾತಿಯ ಸ್ವರಾಂಜಲಿ ತಂಡದ ಶರ್ವರಿ ಜೆಮಿನಿಸ್ ಕಥಕ್ ನೃತ್ಯ ಪ್ರದಶರ್ಿಸಿದ ಪರಿ ವೀಕ್ಷಕರಿಗೆ ಕಲೆಯ ರಸದೌತನ ಉಣ ಬಡಿಸಿತು.
ಆದಿಶಂಕರಾಚಾರ್ಯ ರಚಿತ ನಾರಿ ನಟೇಶ್ವರ ಸ್ತೋತ್ರದ ನೃತ್ಯದೊಂದಿಗೆ ಆರಂಭವಾದ ಕಥಕ್ ನೃತ್ಯ ಪ್ರದರ್ಶನ ಥಟ್ ಎಂಬ ತಾಳ ಪ್ರದರ್ಶನ ಶರ್ವರಿ ಜೆಮಿನಸ್ ತಬಲಾ ಹಾಗೂ ಹಾಮರ್ೋನಿಯಂ ತಾಳಕ್ಕೆ ತಮ್ಮ ಹೆಜ್ಜೆ ಗೆಜ್ಜೆಯ ನಾದ ಮೊಳಗಿಸಿದರು. ಸ್ತ್ರೀ ಸಶಕ್ತಳು ಎಂಬ ಸಂದೇಶ ಸಾರುವ ಮಾತೆ ಕಾಳಿಯ ನೃತ್ಯ ಖಂಡಜಾತಿಯ ಕಾಳಿಪರನ್ ನೃತ್ಯ ಪ್ರದಶರ್ಿಸಿ ಜಯತು ಜಯ ಮಾ ದುಗರ್ೆ ಎಂಬ ಹಿನ್ನಲೆ ಗಾಯನದಲ್ಲಿ ಈ ನೃತ್ಯ ರೂಪಪಡೆದುಕೊಂಡು ಜನರ ಮನತಟ್ಟಿತು. ನಿಖಿಲ್ ಪಾಠಕ್ (ತಬಲಾ), ಸಾರಂಗ ಕುಲಕಣರ್ಿ (ಹಾಮರ್ೋನಿಯಂ), ಶ್ರೀಮತಿ ವೃಣ್ಮಯಿ ಪಾಠಕ್ ಅವರ ಹಿನ್ನಲೆ ಗಾಯನದೊಂದಿಗೆ ಶರ್ವರಿ ಜೆಮಿನಸ್ ಕಥಕ್ ನೃತ್ಯ ಪ್ರದಶರ್ಿಸಿದರು.
ಗೋವರ್ಧನ ಉದ್ದಾರ ಕಥೆಯ ಸಾರಂಶವನ್ನು ನೃತ್ಯದಲ್ಲಿ ಪ್ರದಶರ್ಿಸಿ ಕಥೆಯ ವಿಶ್ಲೇಷಣೆಯನ್ನು ನಿರೂಪಿಸಿದರು.ನೃತ್ಯದೂದ್ದಕ್ಕೂ ಪ್ರತಿಯೊಂದು ಹಂತದಲ್ಲಿ ಆ ನೃತ್ಯದ ವಿಶೇಷತೆಯನ್ನು ವಿವರಿಸುತ್ತ ನೃತ್ಯ ಪ್ರದಶರ್ಿಸಿದ ಶರ್ವರಿ ಜೆಮಿನಿಸ್ ಭಾರತದಲ್ಲಿ ಭಾರತೀಯ ಸಂಸ್ಕೃತಿ ಕೆಳಗುಂದುತ್ತಿದ್ದು ಅದನ್ನು ಎತ್ತಿ ಹಿಡಿದು ಜಗತ್ತಿಕ್ಕೆ ಸಾರಲು ಸ್ವರಾಂಜಲಿ ತಂಡ ಶ್ರಮಿಸುತ್ತಿದೆ ಎಂದು ಹೇಳಿ ಒಂದು ಕಥೆಯನ್ನು ನೃತ್ಯದಲ್ಲಿ ನಿರೂಪಿಸುವುದೇ ಕಥಕ್ ನೃತ್ಯ, ಅದು ಹೆಜ್ಜೆ ಗೆಜ್ಜೆಗಳ ವೈಶಿಷ್ಠ್ಯತೆಯನ್ನು ಹೊಂದಿದೆ ಎಂದರು.
ಕಾರ್ಯಕ್ರಮವನ್ನು ಬಿ.ವ್ಹಿ.ವ್ಹಿ ಸಂಘದ ಗ್ವವರ ಕಾರ್ಯದಶರ್ಿ ವೀರಣ್ಣ ಹಲಕುಕರ್ಿ ಉದ್ಘಾಟಿಸಿದರು. ಸ್ವರಾಂಜಲಿ ತಂಡದ ಮುಖ್ಯಸ್ಥ ಬಿಜಾಪೂರ ಮೂಲದ ಶಿವುಕುಮಾರ ಹಿರೇಮಠ ಈ ಸಂದರ್ಭದಲ್ಲಿ ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಹೊರದೇಶದ ಜನರಲ್ಲಿ ಮೆಚ್ಚುಗೆ ಮೂಡಿಸಿ ಸಂಸ್ಕೃತಿಯ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರುವ ಕೆಲಸವನ್ನು ಸ್ವರಾಂಜಲಿ ತಂಡದ ಮೂಲಕ ಮಾಡಲಾಗುತ್ತಿದ್ದು ಅಮೆರಿಕ ಸೇರಿದಂತೆ ಯೂರೋಪ್ ದೇಶಗಳಲ್ಲಿ ನೃತ್ಯ ಪ್ರದರ್ಶನಗೊಂಡಿದೆ ಎಂದು ಹೇಳಿದರು.
ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಸಿ.ಎಸ್.ಪಾಟೀಲ ಸ್ವಾಗತಿಸಿದರು. ಡಾ.ಅಶೋಕ ಮಲ್ಲಾಪೂರ ಪರಿಚಯಿಸಿದರು. ಡಾ.ಶಿವು ಸೋಲಬಣ್ಣವರ ವಂದಿಸಿದರು. ತೋಟಗಾರಿಕೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ಬಿ.ದಂಡಿನ್, ಬಿ.ವ್ಹಿ.ವ್ಹಿ ಸಂಘದ ಆಡಳಿತಾಧಿಕಾರಿ ಎನ್.ಜಿ.ಕರೂರ, ಡೀನ್ ಪ್ರಕಾಶಪ್ಪ, ಸದಸ್ಯರು ಸೇರಿದಂತೆ ನಗರಸಭೆ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಭಜಂತ್ರಿ, ಸದಸ್ಯರಾದ ರೇಖಾ ಹುಲುಗಬಾಳಿ, ಭಾಗ್ಯಶ್ರೀ ಹಂಡಿ ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment