ಮುಚಖಂಡಿ ಗ್ರಾಮದಲ್ಲಿ ನಡೆದ ಬಿಜೆಪಿ ಜಿಲ್ಲಾ ಅಭ್ಯಾಸ ವರ್ಗದಲ್ಲಿ ಪರೀಕ್ಷೆ ಬರೆಯುತ್ತಿರುವ ಚಿವ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡರ, ಶಸಕರಾದ ವೀರಣ್ಣ ಚರಂತಿಮಠ, ಸಿದ್ದು ಸವದಿ.
ಪರೀಕ್ಷೆ ಬರೆದ ಸಂಸದ, ಸಚಿವರು, ಶಾಸಕರು
ಬಾಗಲಕೋಟೆ 29- ಪಕ್ಷದ ಪ್ರಥಮ ರಾಷ್ಟ್ರೀಯ ಅಧ್ಯಕ್ಷರು ಯಾರು..?, ಭಾರತೀಯ ಜನ ಸಂಘದ ಸಂಸ್ಥಾಪಕರು ಯಾರು..?, ಕನರ್ಾಟಕ ರಾಜ್ಯದ ಅಧ್ಯಕ್ಷರು ಯಾರು..?, ಜಿಲ್ಲಾ ಪದಾಧಿಕಾರಿಗಳಲ್ಲಿ 5 ಜನರನ್ನು ಹೆಸರಿಸಿ..?, ಬಾಗಲಕೋಟೆ ಜಿಲ್ಲಾ ಪಂಚಾಯತ್ನಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಎಷ್ಟು..?
ಭಾರತೀಯ ಜನತಾ ಪಕ್ಷ ಜಿಲ್ಲಾ ಘಟಕ ಮುಚಖಂಡಿ ಗ್ರಾಮದಲ್ಲಿ ಏರ್ಪಡಿಸಿದ್ದ ಜಿಲ್ಲಾ ಅಭ್ಯಾಸ ವರ್ಗದ ಸಮಾರೋಪ ಸಮಾರಂಭಕ್ಕೂ ಮುನ್ನ ಈ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು, ನಮ್ಮ ಬಿಜೆಪಿ ನಮಗೆಷ್ಟು ಗೊತ್ತು ಹಾಗೂ ಸಕರ್ಾರ ಯೋಜನೆಗಳ ಫಲಾನುಭವಿಗಳು ಯಾರು ಹಾಗೂ ಮೊತ್ತ ಎಷ್ಟು, ಈ ಎರಡು ವಿಷಯಗಳ ಮೇಲೆ ಪರೀಕ್ಷೆ ಏರ್ಪಡಿಸಲಾಗಿತ್ತು. ಜಿಲ್ಲಾ ಸಂಘಟನಾ ಕಾರ್ಯದಶರ್ಿ ರವೀಶ, ಜಿಲ್ಲಾಧ್ಯಕ್ಷ ಬಸಲಿಂಗಪ್ಪ ನಾವಲಗಿ ಹಾಗೂ ಅಭ್ಯಾಸ ವರ್ಗದ ಪ್ರಮುಖ ಜಯಂತ ಕುರಂದವಾಡ ನಿಯಂತ್ರಕರಾಗಿದ್ದರೆ ರಾಜ್ಯ ಸಂಘಟನಾ ಕಾರ್ಯದಶರ್ಿ ಸಂತೋಷಜಿ ಸ್ಪೇಶಲ್ ಸ್ಕ್ವಾಡ ಆಗಿ ಆಗಮಿಸಿದ್ದರು.
ಸಚಿವ ಗೋವಿಂದ ಕಾರಜೋಳ, ಕನರ್ಾಟಕ ವಿದ್ಯುತ್ ಮಗ್ಗಗಳ ನಿಗಮದ ಅಧ್ಯಕ್ಷ ಸಿದ್ದು ಸವದಿ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ಶ್ರೀಕಾಂತ ಕುಲಕಣರ್ಿ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಜಿ.ಎಸ್.ನ್ಯಾಮಗೌಡ, ಮಾಜಿ ಶಾಸಕ ರಾಜಶೇಖರ ಶೀಲವಂತ ಜಿ.ಪಂ ಸದಸ್ಯರು, ಜಿಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲ ಮಂಡಲಗಳ ಪದಾಧಿಕಾರಿಗಳು ಅಭ್ಯಥರ್ಿಗಳಾಗಿದ್ದು ಪರೀಕ್ಷೆಯನ್ನು ಕಟ್ಟು ನಿಟ್ಟಾಗಿ ನಡೆಸಲಾಗಿತ್ತು.
ಭಾರತೀಯ ಜನಸಂಘದ ಸಂಸ್ಥಾಪಕ ಯಾರು..?, ಭಾರತೀಯ ಜನತಾ ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರು ಯಾರು..?, ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯರಾಗಿ ನಾವು ಪ್ರತಿಜ್ಞಾ ಬದ್ಧರಾದ ಪಂಚ ನಿಷ್ಠೆಗಳು ಯಾವುವು..?, ವಂದೇ ಮಾತರಂ ರಣ ಮಂತ್ರ ಬರೆದ ಕವಿ ಯಾರು...?, ಈಗಿನ ರಾಷ್ಟ್ರೀಯ ಅಧ್ಯಕ್ಷರು ಯಾರು..?, ಕನರ್ಾಟಕ ರಾಜ್ಯದ ಅಧ್ಯಕ್ಷರು ಯಾರು..?, ಬಿಜೆಪಿ ಸಕರ್ಾರ ಯಾವ ಯಾವ ರಾಜ್ಯಗಳಲ್ಲಿದೆ..?, 4 ರಾಷ್ಟ್ರೀಯ ಪದಾಧಿಕಾರಿಗಳ ಹೆಸರು ಬರೆಯಿರಿ..?, 6 ರಾಜ್ಯ ಪದಾಧಿಕಾರಿಗಳ ಹೆಸರು ಬರೆಯಿರಿ..?, ಬಾಗಲಕೋಟೆ ಜಿಲ್ಲಾ ಪಂಚಾಯತ್ನಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಎಷ್ಟು...? ಈ ರೀತಿಯ ಹಲವು ಪ್ರಶ್ನೆಗಳು ನಮ್ಮ ಬಿಜೆಪಿ ನಮಗೆಷ್ಟು ಗೊತ್ತು ವಿಷಯದಲ್ಲಾದರೆ ಕೆಳಗೆ ನಮೂದಿಸಿದ ಯೋಜನೆಗಳ ಫಲಾನುಭವಿಗಳು ಯಾರು ಹಾಗೂ ಎಷ್ಟು ಹಣ ಸಿಗುವುದು ಎನ್ನುವ ವಿಷಯದಲ್ಲಿ ವಿವಿಧ ಯೋಜನೆಗಳ ಹೆಸರು ನೀಡಿ ಅದರ ಮುಂದೆ ಖಾಲಿ ಇರುವ ಜಾಗೆಯಲ್ಲಿ ಫಲಾನುಭವಿಗಳು ಹಾಗೂ ಎಷ್ಟು ಹಣ ನೀಡಲಾಗುತ್ತಿದೆ ಎಂದು ಬರೆಯಬೇಕಾಗಿತ್ತು.
ಈ ಪರೀಕ್ಷೆ ಅಭ್ಯಾಸ ವರ್ಗದ ವಿಶೇಷವಾದರೆ ಒಟ್ಟಾರೆ ಅಬ್ಯಾಸ ವರ್ಗ ಸಂಘಟನಾತ್ಮಕ ಬೆಳವಣಿಗೆಯ ಕುರಿತು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಸಂಘಟನಾ ಕಾರ್ಯದಶರ್ಿ ಸಂತೋಷಜಿ ಮಾತನಾಡಿದರು. ಸಂಸದ ಪಿ.ಸಿ.ಗದ್ದಿಗೌಡರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಕನರ್ಾಟಕ ವಿದ್ಯುತ್ ಮಗ್ಗಗಳ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕರಾದ ಶ್ರೀಕಾಂತ ಕುಲಕಣರ್ಿ, ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಜೆ.ಎಸ್.ನ್ಯಾಮಗೌಡ, ಮಾಜಿ ಶಾಸಕ ರಾಜಶೇಖರ ಶೀಲವಂತ, ಜಿ.ಪಂ ಸದಸ್ಯ ಹಣಮಂತ ನಿರಾಣಿ, ಬಿಟಿಡಿಎ ಸಭಾಪತಿ ಲಿಂಗರಾಜ ವಾಲಿ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲ ಮಂಡಲಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
No comments:
Post a Comment