Sunday, May 1, 2011

                        ಧಮ್ ಮಾರೋ ಧಮ್...,
 
                                                       ಗಾಂಜಾ ಆವರಿಸಿಕೊಂಡರೆ ಜೀವನವೆಲ್ಲ ಸಜ.

ವ್ಯಾಪಕವಾಗಿ ಹರಡುತ್ತಿರುವ ಗಾಂಜಾ ಫ್ಯಾಶನ್ ; ಜಾಲಾಡಬೇಕಾಗಿದೆ ಇದರ ಇಂಟರ್ ಕನೆಕ್ಷನ್


ಬಾಗಲಕೋಟೆ ; ವಿದ್ಯಾಥರ್ಿಗಳು ಫ್ಯಾಶನ್ಗಾಗಿ ಏನ ಏನ ಮಾಡುತ್ತಿದ್ದಾರೆ ಎಂದು ತಿಳಿಸುವ ಅಚ್ಚರಿಯ ವಿಷಯ ಬಾಗಲಕೋಟೆ ನಗರದಲ್ಲಿದೆ. ಗುಂಪು ಗುಂಪಾಗಿ ಸೇರಿ, ದೂರದ ಪ್ರದೇಶಕ್ಕೆ ಹೋಗಿ ಜಿದ್ದಿಗೆ ಬಿದ್ದು ಸೇದುತ್ತಾರೆ, ಅದರಿಂದ ದೇಹದಾಡ್ರ್ಯತೆ ಹೆಚ್ಚಿಸಿಕೊಳ್ಳಬಹುದು, ಶಕ್ತಿವಂತರಾಗಬಹುದು, ಧೈರ್ಯ ಹೊಂದಬಹುದು ಎಂದೆಲ್ಲ ನಂಬಿಕೆಗಳನ್ನು ಇಟ್ಟುಕೊಂಡು ನಿತ್ಯ ಕಾಲೇಜು ಮುಗಿಸಿಕೊಂಡು ಸಂಜೆ ನಗರ ಹೊರವಲಯಕ್ಕೆ ವಾಯುವಿಹಾರಕ್ಕೆಂದು ಹೋಗುವ ವಿದ್ಯಾಥರ್ಿಗಳು ಗುಂಪು ಗುಂಪಾಗಿ ಗಾಂಜಾ ಸೇದುತ್ತಾರೆ, ಇದು ಪಾಶ್ಚಿಮಾತ್ಯದ ಅಂಧಾನುಕರಣೆ.
ಬಾಗಲಕೋಟೆ ವಿದ್ಯಾನಗರಿ, ಸರಸ್ವತಿ ಧಾಮ, ವಿದ್ಯಾ ದಾಸೋಹ ಕ್ಷೇತ್ರ ಎಂದೆಲ್ಲ ಪ್ರಸಿದ್ಧಿ ಪಡೆದಿದೆ, ದೂರದೂರದಿಂದ ವಿದ್ಯಾಥರ್ಿಗಳು ಇಲ್ಲಿ ಕಲಿಯಲು ಆಗಮಿಸುತ್ತಾರೆ, ದೂರದ ರಾಜಸ್ಥಾನ, ಗುಜರಾತ, ಕಾಶ್ಮೀರ, ಹಿಮಾಚಲ, ಅರುಣಾಚಲ, ಮಣಿಪುರ ಸೇರಿದಂತೆ ಉತ್ತರ ಭಾರತದ ಬಹುತೇಕ ರಾಜ್ಯಗಳ ವಿದ್ಯಾಥರ್ಿಗಳು ಇಲ್ಲಿ ಅಧ್ಯಯನ ಮಾಡಲು ಆಗಮಿಸುತ್ತಾರೆ, ಕಾಲೇಜಿನ ವಸತಿ ನಿಲಯಗಳಲ್ಲಿ ಕೆಲವರು ಮಾತ್ರ ಪ್ರವೇಶ ಪಡೆಯುತ್ತಿದ್ದು ಉಳಿದವರೆಲ್ಲ ಬಾಡಿಗೆ ರೂಂ ಪಡೆದು ವಾಸಿಸುತ್ತಾರೆ, ಇಲ್ಲಿ ಅವರಿಗೆ ಯಾರೂ ಮೇಲ್ವಿಚಾರಕರು ಇರೋದಿಲ್ಲ.
ದೂರದಿಂದ ಬಂದಂತಹ ಕೆಲ ವಿದ್ಯಾಥರ್ಿಗಳ ಜೊತೆ ಇಲ್ಲಿನ ಕೆಲ ವಿದ್ಯಾಥರ್ಿಗಳು, ಪಡ್ಡೆ ಯುವಕರು ಸ್ನೇಹ ಬೆಳೆಸಿ ಅವರಂತೆ ಕುಣಿಯಲು ಪ್ರಾರಂಭಿಸಿ ಕೊನೆಗೆ ದುಶ್ಚಟದ ಹಂತಕ್ಕೆ ತಲುಪಿ ಇಲ್ಲಿನ ಗಾಂಜಾ ಸೇದುವ ಯುವಕರ ಜೊತೆಗೂಡಿ ಹೊರ ರಾಜ್ಯದ ಯುವಕರು ಸಹ ದುಶ್ಚಟಕ್ಕೆ ಬಲಿಯಾಗುತ್ತಾರೆ. ಬೇಕಾಬಿಟ್ಟಿಯಾಗಿ ಮಾರಾಟವಾಗುತ್ತಿರುವ ಗಂಜಾ ಸಂತೆಯಲ್ಲೊಂದೆ ಸಿಗುವದು ಮಾತ್ರ ಬಾಕಿ ಇದೆ. ಗಾಂಜಾ ಮಾರುವವರು ಮೋಬೈಲ್ ನಂ. ಪಡೆದುಕೊಂಡು ಮೋಬೈಲ್ ಮೂಲಕವೇ ವ್ಯವಹರಿಸಿ ತಾವಿದ್ದ ಸ್ಥಳಕ್ಕೆ ತಂದು ಕೊಡುವಂತೆ ಕೋರಿ ಗಾಂಜಾ ತಗೆದುಕೊಂಡು ಹೊರವಲಯಕ್ಕೆ ಹೋಗಿ ಸೇದುತ್ತಾರೆ. ಇದು ನೈಜ ಸ್ಥಿತಿಯಾದರೂ ಇದರ ಬಗ್ಗೆ ಗಂಭೀರವಾಗಿ ಯೋಚಿಸುವಂತಹ ಪ್ರವೃತ್ತಿ ಇನ್ನೂ ರೂಢಿಯಲ್ಲಿ ಬಂದಿಲ್ಲ.
ಕಾಲೇಜು ಆಡಳಿತ ಮಂಡಳಿ ವಸತಿನಿಯಲದ ವಿದ್ಯಾಥರ್ಿಗಳನ್ನು ಮಾತ್ರ ತಮ್ಮ ಶಿಸ್ತು ಬದ್ಧತೆಯಲ್ಲಿ ಇಟ್ಟುಕೊಂಡಿರುತ್ತಾರೆ, ಬಾಡಿಗೆ ರೂಂ ಪಡೆದ ವಿದ್ಯಾಥರ್ಿಗಳಿಗೆ ಹೇಳುವವರು ಇಲ್ಲ, ಕೇಳುವವರಂತೂ ಇಲ್ಲವೇ ಇಲ್ಲ. ನಗರ ದೊಡ್ಡ ದೊಡ್ಡ ಮನತನದ ಯುವಕರು, ವಿದ್ಯಾಥರ್ಿಗಳು ಗಾಂಜಾ ಸೇದುವ ಪ್ರವೃತ್ತಿಗೆ ಮಾರುಹೋಗಿ ನಿತ್ಯ ಸೇದುವದು ಒಂದು ಫ್ಯಾಶನ್ ಆಗಿ ಪರಿವರ್ತನೆಯಾಗಿದೆ. ಈ ಫ್ಯಾಶನ್ ಯುವ ಸಮುದಾಯಕ್ಕೆ ಮಾರಕ ಎಂದು ತಿಳಿಸಿಕೊಡುವ ಅವಶ್ಯಕತೆ ಇದೆ, ಗಾಂಜಾ ಮಾರುವವರನ್ನು ಪೋಲಿಸರು ಬಂಧಿಸುವ ಅಗತ್ಯತೆ ಇದ್ದು ಮಾರುವವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕಾಗಿದೆ.
ಇನ್ನೊಂದು ಅಚ್ಚರಿಯ ವಿಷಯವೇನೆಂದರೆ ಬ್ರಾಡಗೇಜ್ ರೈಲು ಪ್ರಾರಂಭವಾದಾಗಿನಿಂದಲೂ ಬೆರೆ ಬೆರೆ ಪಟ್ಟಣಗಳಿಂದ ಮಾನಸಿಕ ಅಸ್ವಸ್ಥರು ರೈಲಿನ ಮುಖಾಂತರ ಆಗಮಿಸಿದ್ದಾರೆ, ಅಂತಹವರಿಗೆ ಗಾಂಜಾ ಪ್ರತಿ ಕ್ಷಣದ ಸಂಗಾತಿ, ಎಲ್ಲೆಂದರಲ್ಲಿ ಗಾಂಜಾ ಸೇದುವ ಅವರ ಬಳಿ ಯುವಕರು ಹೋಗಿ ಕೆಲವರು ಹಣ ಕೊಟ್ಟು ಖರೀದಿ ಮಾಡಿದರೆ ಇನ್ನು ಕೆಲವರು ಕಿತ್ತುಕೊಂಡು ಬರುತ್ತಾರೆ.
ಯುವ ಸಂಘಟನೆಗಳು, ವಿದ್ಯಾಥರ್ಿ ಸಂಘಟನೆಗಳು ರಾಷ್ಟ್ರ, ರಾಜ್ಯ ಸಮಸ್ಯೆಗಳನ್ನು ಕೆಲ ಹೊತ್ತು ಬದಿಗಿಟ್ಟು ಭಾರತದ ಬುನಾದಿ ಎಂದು ಕರೆಯಿಸಿಕೊಳ್ಳುವ ಯುವಕರನ್ನು ಮೊದಲು ತಿದ್ದುವ ಅವಶ್ಯಕತೆ ಇದೆ, ಯುವಕರ ಮನತಟ್ಟುವ ಹಾಗೆ ಮನವರಿಕ ಮಾಡಿ ಇಂತಹ ದುಶ್ಚಟಗಳಿಂದ ಬಿಡುಗಡೆಗೊಳಿಸಿಬೇಕು, ಪೋಲಿಸ ಇಲಾಖೆ ಇನ್ನಾದರ ಎಚ್ಚೆತ್ತುಕೊಂಡು ಗಾಂಜಾ ಮಾರುವವರನ್ನು ಬಂಧಿಸಬೇಕು.


ಭಾಸ್ಕರ ಮನಗೂಳಿ

Thursday, February 10, 2011

ಕಾಗರ್ಿಲ್ ರಣರಂಗದಲ್ಲಿ ಕೈ ಕಾಳು ಕಳೆದುಕೊಂಡ ರಂಗಪ್ಪ


ರಂಗಪ್ಪ ಅಂದು.                                                                                                               
   ಕಾಗರ್ಿಲ್ ರಣರಂಗದಲ್ಲಿ ಕೈ ಕಾಳು ಕಳೆದುಕೊಂಡ ರಂಗಪ್ಪ


ದೇಶವನ್ನು ಪ್ರೀತಿಸುವ ಗೌರವಿಸುವ ರಕ್ಷಿಸುವ ಜನರು ಭಾರತದಲ್ಲಿ ಮಾತ್ರ ಸಿಗುತ್ತಾರೆ, ಇದು ಪ್ರಥಮ ಸ್ವಾತಂತ್ರ ಸಂಗ್ರಾಮದಿಂದಲು ನಾವು ಕಾಣಬಹುದು. 1857 ರಲ್ಲಿ ನಡೆದ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ಇದೇ ಬಾಗಲಕೋಟೆ ಜಿಲ್ಲೆಯ ಮುದೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರಾದ ವೀರ ಜಡಗಾ, ಬಾಲ, ರಾಮರಂಥಹ ಅನೇಕ ವೀರರು ಆಂಗ್ಲರ ವಿರುದ್ದ ಬಂಡಾಯ ಎದ್ದು ದೇಶದ ರಕ್ಷಣೆಗೆ ಪಣತೊಟ್ಟು ನಿಂತಿದ್ದರು, ಮುಂದೆ ವಿನಾಯಕ ದಾಮೋಧರ ಸಾವರಕರ ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಅಂದಮಾನ ನಿಕೋಬಾರ್ ಜೈಲನಲ್ಲಿ ಕಾಲಾ ಪಾಣಿ ಶಿಕ್ಷೆ ಅನುಭವಿಸಿದ್ದಂತು ನೆನಿಸಿಕೊಂಡರೆ ದೇಶ ದ್ರೋಹಿಗಳ ಎದೆಶೀಳುವಂತೆ ರೋಷಬರುತ್ತೆ, ಪಂಡಿತ ಚಂದ್ರಶೇಖರ ಆಜಾದರಿಗೆ ಆಂಗ್ಲರು ಬೆನ್ನಟ್ಟಿ ಗುಂಡು ಹಾರಿಸಲು ಬಂದಾಗ ಅವರ ಸಾವು ಕೂಡಾ ಆಂಗ್ಲ ಪಾಪಿಗಳಿಂದಾಗಬಾರದು ಎಂಬ ಒಂದೇ ಕಾರಣಕ್ಕೆ ತಮ್ಮ ಕಾಡತೋಸಿನಿಂದಲೇ ಸ್ವತಃ ತಾವೇ ತಲೆಗೆ ಗುಂಡು ಹಾರಿಸಿಕೊಂಡು ಆಜಾದರಾಗಿಯೇ ಭಾರತ ಮಾತೆಗೆ ಪ್ರಾಣಾರ್ಪಣೆ ಮಾಡಿದರು.
ಸ್ವತಂತ್ರ ಸಂಗ್ರಾಮದ ಘಳಿಗೆಯನ್ನು ನೆನೆಯುತ್ತ ಹೋದರೆ ಹೋರಾಟಗಾರ ಪಟ್ಟಿಯೇ ಕಣ್ಮುಂದೆ ಬರುತ್ತದೆ, ಹೀಗೆ ಅಲ್ಲಿಂದ ಇಲ್ಲಿಯವರೆಗೂ ಪ್ರತಿಯೊಬ್ಬ ಮೂಲ ಭಾರತೀಯ ದೇಶವನ್ನು ರಕ್ಷಿಸುತ್ತ ಗೌರವಿಸುತ್ತ ಬಂದಿದ್ದಾನೆ. ಇಂದಿಗೂ ದೇಶವನ್ನು ರಕ್ಷಿಸುವದಕ್ಕಾಗಿ ಮನೆ ಮಠಗಳನ್ನು ಬಿಟ್ಟು ತಮನ್ನು ತಾವೇ ಸ್ವಇಚ್ಚೆಯಿಂದ ದೇಶದ ಹಿತಕ್ಕಾಗಿ ಪೂಣರ್ಾವಧಿ ಕೆಲಸ ಮಾಡುವವರನ್ನು, ಗಡಿ ಭಾಗದಲ್ಲಿ ನಿಂತೂ ಪ್ರಾಣಕ್ಕೂ ಹೆದರದೆ ಜೀವನದ ಎಲ್ಲ ಆಸೆಗಳನ್ನು ಬಿಟ್ಟ ವೀರ ಯೋಧರನ್ನು ನಾವು ನೋಡಬಹುದು ಆದರೆ ಇವರಿಗೆ ಸರಕಾರದಿಂದ ಯಾವುದೇ ಸವಲತ್ತು ಸಿಗುವುದಿಲ್ಲ ಎನ್ನುವುದು ಮಾತ್ರ ಅಷ್ಠೆ ಸತ್ಯ.
1999 ರಲ್ಲಿ ನಡೆದ ಕಾಗರ್ಿಲ್ ಯುದ್ದ, ಸಾವಿರಾರು ಉಗ್ರರು ವಶಪಡಿಸಿಕೊಂಡಿದ್ದ ಟೈಗರ್ ಪರ್ವತ, ಲಢಾಕ್, ಕಾಗರ್ಿಲ್ನ್ನು ಪ್ರಾಣದ ಹಂಗ ತೊರೆದು ಭಾರತದ ಸೈನಿಕರು ಮುನ್ನುಗ್ಗಿ ಅದನ್ನು ಉಗ್ರಗಾಮಿಗಳಿಂದ ಬಿಡಿಸಿಕೊಂಡಿದ್ದರು, ಈ ಯುದ್ದದಲ್ಲಿ  ಭಾರತ ಅನೇಕ ವೀರ ಯೋಧರನ್ನು ಕಳೆದುಕೊಂಡಿತು ಅಷ್ಠೆ ಅಲ್ಲ ಅನೇಕರಿಗೆ ವಿಕಲಾಂಗರನ್ನಾಗಿ ಮಾಡಿತು, ಅವರ ತ್ಯಾಗ ದೇಶದ ಮತ್ತು ನಮ್ಮೆಲ್ಲರ ರಕ್ಷಣೆ ಒಂದೇ ಗುರಿಯಾಗಿತ್ತು, ಈ ಯುದ್ದದಲ್ಲಿ ಬಾಗಲಕೋಟೆ ಜಿಲ್ಲೆಯ ಅನೇಕ ಸೈನಿಕರು ತಮ್ಮ ಪ್ರಾಣವನ್ನು ದೇಶಕ್ಕಾಗಿ ಅಪರ್ಿಸಿದ್ದಾರೆ, ವಿಕಲಾಂಗರು ಆಗಿದ್ದಾರೆ ಅಂತವರಲ್ಲಿ ಜಿಲ್ಲೆಯ ಬದಾಮಿ ತಾಲೂಕಿನ ಹುಲಸಗೇರಿ ಗ್ರಾಮದ ರಂಗಪ್ಪ ಹುಲಿಯಪ್ಪ ಆಲೂರ ಕೂಡಾ ಒಬ್ಬರು.
ಈ ಯೋಧ 1999 ರಲ್ಲಿ ಕಾಗರ್ಿಲ್ ಯುದ್ದದಲ್ಲಿ ಪಾಲ್ಗೊಂಡು ತನ್ನ ಎರಡು ಕೈಗಳನ್ನು ಒಂದು ಕಾಲನ್ನು ಕಳೆದುಕೊಂಡು ಭಾರತದ ರಕ್ಷಣೆ ಹೋರಾಡಿದ ವೀರ. 1993 ರಲ್ಲಿ ಬೆಳಗಾವಿಯ ಎಂ.ಎಲ್.ಐ.ಆರ್.ಸಿ ಮರಾಠ ಲೈಟ ಇನ್ಫೇಂಟ್ರಿ ರೆಜಿಮೆಂಟ ಸೆಂಟರ್ಸನಲ್ಲಿ ಇಡಿಯನ್ ಆಮರ್ಿಗೆ ಸೇರಿಕೊಂಡ, 3 ವರ್ಷದ ತರಬೇತಿ ಅವಧಿಯನ್ನು ಪೂರ್ಣಗೊಳಿಸಿದ ನಂತರ ಈತನನ್ನು ಗುಜರಾತ ರಾಜ್ಯದ ಅಹ್ಮದಾಬಾದಗೆ ವಗರ್ಾಯಿಸಲಾಯಿತು, ಅಲ್ಲಿ 2 ವರ್ಷಗಳ ಸೇವೆಯ ನಂತರ ಅಸ್ಸಾಂ ರಾಜ್ಯದಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದರು, ನಂತರ ಇವರಿಗೆ ವರ್ಗವಾಗಿದ್ದು ಭಾರತ ಮಾತೆಯ ಮುಕುಟ ಜಮ್ಮು ಮತ್ತು ಕಾಶ್ಮೀರಕ್ಕೆ, ಕಾಗರ್ಿಲ್ ಯುದ್ದದ ಸಮಯ, ಅತ್ತ ಪಾಕಿಸ್ತಾನಿ ಉಗ್ರರು ದಾಳಿ ಮಾಡುತ್ತಲೆ ಇದ್ದರು, ಇವರು ಲೇಹ ಲಢಾಕ್ ಸಿಯಾಚಿನ್ ಗ್ಲೆಸಿಯರನ್ ಕಾಗರ್ಿಲ್ದಲ್ಲಿ ಯುದ್ದ ಕಾರ್ಯಾಚರಣೆಯಲ್ಲಿ ತೊಡಗಿದ್ದರು, ಏಕಾಏಕಿ ಪಾಕಿಸ್ತಾನಿ ಉಗ್ರರು ಮೀಜಾಯಿಲ್ ಬಾಂಬ್ ದಾಳಿ ನಡೆಸಿದ್ದರು, ಬಾಂಬ್ ದಾಳಿ ಮಾಡಿದ ಸ್ಥಳದಲ್ಲಿ ಇವರೊಡನೆ ಏಳು ಜನ ಸೈನಿಕರು ಮಾತ್ರ ಇದ್ದರು, ಇವರೊಡನೆ ಇದ್ದ ಏಳು ಜನ ವೀರ ಮರಣಹೊಂದಿದರು, ಇವರು ಕೂಡಾ ಉಳಿಯಲಾಗದಂತಹ ಸ್ಥಿತಿಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು, 48 ಗಂಟೆಗಳ ನಂತರ ಭಾರತ ಸರಕಾರ ವೀರ ಮರಣಹೊಂದಿದವರ ಶವಗಳನ್ನು ತಮ್ಮ ತಮ್ಮ ಉರಿಗೆ ಸಾಗಿಸಲು ಸೈನಿಕರು ಬಂದಾಗ ರಂಗಪ್ಪ ರಂಗಪ್ಪ ಎಂದು ಸಹ ಸೈನಿಕರು ಕರೆದಾಗ ಇವರಿಗೆ ಎಚ್ಚರವಾಯಿತು, ನಾನಿನ್ನು ಬದುಕಿದ್ದೇನೆ ಸರ್ ಎಂದು ಕೂಗಿದ ತಕ್ಷಣವೇ ಶವ ಸಾಗಿಸಲು ಆಗಮಿಸಿದ್ದ ಸೈನಿಕರು ಸರಕಾರಕ್ಕೆ ಮಾಹಿತಿಕೊಟ್ಟು ಹೆಲಿಕಾಪ್ಟರ್ ಮುಖಾಂತರ ಅವರನ್ನು ಪಠಾನ್ಕೂಟ್ ಆಸ್ಪತ್ರೆಗೆ ದಾಖಲಿಸಲಾಯಿತು, ಅದು ಚಿಕ್ಕ ಆಸ್ಪತ್ರೆಯಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಅಲ್ಲಿಂದ ಪಂಜಾಬ್ನ ಚಂಡಿಗಡ ಆಸ್ಪತ್ರೆಗೆ ದಾಖಲಿಸಲಾಯಿತು, ತೀವ್ರವಾಗಿ ಗಾಯಗೊಂಡಿದ್ದ ಇವರ ಎರಡು ಕೈಗಳನ್ನು ಒಂದು ಕಾಲನ್ನು ಅನಿವಾರ್ಯವಾಗಿ ಕತ್ತರಿಸಲಾಯಿತು, ಒಂದು ವರ್ಷ ಆಸ್ಪತ್ರಯಲ್ಲೆ ಕಳೆಯಬೇಕಾಯಿತು. ಇಷ್ಠೆಲ್ಲಾ ಆದರೂ ರಂಗಪ್ಪ ಇಂದಿಗೂ ದೇಶದ ರಕ್ಷಣೆಯಲ್ಲಿ ತಮ್ಮ ಪಾತ್ರ ನೆನೆಸಿಕೊಂಡು ದೇಶದ ರಕ್ಷಣೆಯಲ್ಲಿ ಇಂತಹ ಅವಕಾಶ ಯಾರಿಗೆ ಸಿಗುತ್ತೆ ಹೇಳಿ ಎಂದು ಹೆಮ್ಮೆ ಪಡುತ್ತಾರೆ ಅಷ್ಠೆ ದುಖಃನು ಪಡುತ್ತಾರೆ, ದೇಶಕ್ಕಾಗಿ ಪ್ರಾಣದ ಹಂಗನ್ನು ತೊರೆದು ವೈರಿಗಳ ಸೆದೆಬಡಿಯಲು ಮುಂದಾದಾಗ ಬಾಂಬ್ ದಾಳಿಯಿಂದ ಎರಡು ಕೈಗಳನ್ನು, ಒಂದು ಕಾಲನ್ನು ಕಳೆದುಕೊಂಡಿದ್ದು ಈ ದೇಶದ ಆಗಿನ ಪ್ರಧಾನ ಮಂತ್ರಿಗೂ ಗೊತ್ತು ಎಲ್ಲರಿಗೂ ಗೊತ್ತು ಆದರೂ ಸರಕಾರ ಏನು ಸಹಾಯ ಮಾಡಿಲ್ಲ ಎಂದ ವಿಷಾದದಿಂದ ಹೇಳುತ್ತಾರೆ.
ರಂಗಪ್ಪ ಜನಿಸಿದ್ದು 1974ರಲ್ಲಿ, ಪಿ.ಯು.ಸಿ ದ್ವಿತೀಯ ವರೆಗೆ ಶಿಕ್ಷಣ ಮುಗಿಸಿದ ಇವರಿಗೆ 2 ತಮ್ಮಂದಿರು, ಒಬ್ಬಳೇ ತಂಗಿ. ತಮ್ಮ ಹುಟ್ಟಿನಿಂದಲೂ ಕಿವುಡ ಮತ್ತು ಮೂಖ, ಸಹೋದರಿಗೆ ಮದುವೆಯಾಗಿದೆ, ತಂದೆ ತೀರಿಕೊಂಡು ಒಂದು ವರ್ಷವಾಯಿತು, ತಾಯಿಯೊಂದಿಗೆ ದಿನಗಳನ್ನು ಸಾಗಿಸಿತ್ತಿರುವ ಇವರ ಮೇಲೆ ಮನೆಯ ಸಂಪೂರ್ಣ ಜವಾಬ್ದಾರಿ.
ಯುದ್ದದಲ್ಲಿ ಎರಡು ಕೈಗಳನ್ನು, ಒಂದು ಕಾಲನ್ನು ಕಳೆದುಕೊಂಡು ಇವರು ಸಂಪೂರ್ಣ ವಿಕಲಾಂಗರು, ಚಿಕಿತ್ಸೆಯ ನಂತರ ಸ್ವಗ್ರಾಮಕ್ಕೆ ಆಗಮಿಸಿದ ಇವರು ಉದ್ಯೋಗಾವಕಾಶಕ್ಕೆ ಅನೇಕ ಅಜರ್ಿಗಳನ್ನು ಹಾಕಿದರು ಯಾವುದೇ ಫಲಶೃತಿ ಇಲ್ಲ, ಎಸ್.ಟಿ.ಡಿ, ಝರಾಕ್ಸ, ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ, ಬಾರ್ ಅಂಗಡಿ ಲೈಸನ್ಸಗೋಸ್ಕರ, ಜಿಲ್ಲಾ ನ್ಯಾಯಾಲಯದಲ್ಲಿ ಜವಾನ ಹುದ್ದೆಗಳಿಗೆ ಅಜರ್ಿ ಸಲ್ಲಿಸಿದರೂ ಇಲ್ಲಿಯವರೆಗೆ ಯಾವುದೇ ಸರಕಾರಿ ಅಥವಾ ಸಂಸ್ಥೆಗಳ ಸೌಲಭ್ಯ ದೊರೆತಿಲ್ಲ ಎಂದು ಕಣ್ಣೀರಿಡುತ್ತ ಹೇಳುತ್ತಾರೆ.
ಇದು ದೇಶದ ರಕ್ಷಣೆಗಾಗಿ ವಿಕಲಾಂಗರಾದ ವೀರ ಸೈನಿಕ ರಂಗಪ್ಪ ಅವರ ಕಥೆ ವ್ಯಥೆ, ಸರಕಾರ ಸೈನಿಕರ ಮೇಲೆ ಇಟ್ಟಿರುವ ನಿಷ್ಕಾಳಜಿ ಎತ್ತಿ ತೊರಿಸುತ್ತೆ, ಸರಕಾರ ಅಂತೂ ಮುಂದೆ ಬರಲ್ಲ ಅಂತಾ ಅವರು ಕೈಬಿಟ್ಟು ಸುಮ್ಮನಾಗಿ ಬಿಟ್ಟಿದ್ದರು, ಇಂತಹ ಸಂದರ್ಭದಲ್ಲಿ ಇವರ ಸುದ್ದಿ ತಿಳಿದ ತಕ್ಷಣ ಸ್ಪಂದಿಸಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆ "ಸೇವಾ ಭಾರತಿ", ಸದಾ ಭಾರತದ ಸೇವೆಯಲ್ಲೆ ತನ್ನನ್ನು ತಾನು ತನ್ನದೇ ಆದ ರೀತಿಯಲ್ಲಿ ತೊಡಗಿಸಿಕೊಂಡಿರುವ ಈ ಸೇವಾ ಭಾರತಿ ಸಂಸ್ಥೆ ಈ ವೀರ ಯೋಧನಿಗೆ ಒಂದು ಲಕ್ಷ ರೂ.ಗಳ ಸಹಾಯಾರ್ಥ ಧನದ ಜೊತೆಗೆ ಇಂದು ಸನ್ಮಾನಿಸಲಾಗುತ್ತಿದೆ, ಇದು ಪ್ರತಿಯಬ್ಬ ವೀರ ಯೋಧನಿಗೆ ಸಿಗಬೇಕಾದ ಗೌರವ, ಸೇವಾ ಭಾರತಿ ಸಂಸ್ಥೆ ಮುಂದೆ ಬಂದಹಾಗೆ ಸರಕಾರ ಹಾಗೂ ನಿವೂ ಮುಂದೆ ಬರಬಹುದಲ್ಲವೇ....?


ಭಾಸ್ಕರ ಮನಗೂಳಿ.

Tuesday, February 1, 2011

ಪರೀಕ್ಷೆ ಬರೆದ ಸಂಸದ, ಸಚಿವರು, ಶಾಸಕರು


         ಮುಚಖಂಡಿ ಗ್ರಾಮದಲ್ಲಿ ನಡೆದ ಬಿಜೆಪಿ ಜಿಲ್ಲಾ ಅಭ್ಯಾಸ ವರ್ಗದಲ್ಲಿ ಪರೀಕ್ಷೆ ಬರೆಯುತ್ತಿರುವ ಚಿವ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡರ, ಶಸಕರಾದ ವೀರಣ್ಣ ಚರಂತಿಮಠ, ಸಿದ್ದು ಸವದಿ.





                                               ಪರೀಕ್ಷೆ  ಬರೆದ  ಸಂಸದ, ಸಚಿವರು, ಶಾಸಕರು


ಬಾಗಲಕೋಟೆ 29- ಪಕ್ಷದ ಪ್ರಥಮ ರಾಷ್ಟ್ರೀಯ ಅಧ್ಯಕ್ಷರು ಯಾರು..?, ಭಾರತೀಯ ಜನ ಸಂಘದ ಸಂಸ್ಥಾಪಕರು ಯಾರು..?, ಕನರ್ಾಟಕ ರಾಜ್ಯದ ಅಧ್ಯಕ್ಷರು ಯಾರು..?, ಜಿಲ್ಲಾ ಪದಾಧಿಕಾರಿಗಳಲ್ಲಿ 5 ಜನರನ್ನು ಹೆಸರಿಸಿ..?, ಬಾಗಲಕೋಟೆ ಜಿಲ್ಲಾ ಪಂಚಾಯತ್ನಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಎಷ್ಟು..?
ಈ ಪ್ರಶ್ನೆಗಳು ಉದ್ಭವಿಸಿದ್ದು ಎಲ್ಲಿ ಎಂದು ಯೋಚಿಸುತ್ತಿದ್ದೀರಾ..., ಅತ್ಯಂತ ಕಟ್ಟು ನಿಟ್ಟು, ಶಿಸ್ತು ಬದ್ಧ ಪರೀಕ್ಷೆ, ಅರ್ಧ ಗಂಟೆ ಕಾಲಾವಕಾಶ, ಎರಡು ವಿಷಯಗಳು, ಸುಲಭವಾಗಿ ಉತ್ತರಿಸಬಲ್ಲ ಪ್ರಶ್ನೆಗಳು ಅದಕ್ಕೆ ಉತ್ತರಿಸುವ ಅಭ್ಯಥರ್ಿಗಳು ಸಂಸದ, ಸಚಿವರು, ಶಾಸಕರು, ಜಿ.ಪಂ ಸದಸ್ಯರು ಹಾಗೂ ಜಿಲ್ಲಾ ಪದಾಧಿಕಾರಿಗಳು. ಬಿಜೆಪಿ ರಾಜ್ಯ ಸಂಘಟನಾ ಕಾರ್ಯದಶರ್ಿ ಸಂತೋಷಜಿ ಸ್ಪೇಶಲ್ ಸ್ಕ್ವಾಡ್ ಆಗಿದ್ದರು.
ಭಾರತೀಯ ಜನತಾ ಪಕ್ಷ ಜಿಲ್ಲಾ ಘಟಕ ಮುಚಖಂಡಿ ಗ್ರಾಮದಲ್ಲಿ ಏರ್ಪಡಿಸಿದ್ದ ಜಿಲ್ಲಾ ಅಭ್ಯಾಸ ವರ್ಗದ ಸಮಾರೋಪ ಸಮಾರಂಭಕ್ಕೂ ಮುನ್ನ ಈ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು, ನಮ್ಮ ಬಿಜೆಪಿ ನಮಗೆಷ್ಟು ಗೊತ್ತು ಹಾಗೂ ಸಕರ್ಾರ ಯೋಜನೆಗಳ ಫಲಾನುಭವಿಗಳು ಯಾರು ಹಾಗೂ ಮೊತ್ತ ಎಷ್ಟು, ಈ ಎರಡು ವಿಷಯಗಳ ಮೇಲೆ ಪರೀಕ್ಷೆ ಏರ್ಪಡಿಸಲಾಗಿತ್ತು. ಜಿಲ್ಲಾ ಸಂಘಟನಾ ಕಾರ್ಯದಶರ್ಿ ರವೀಶ, ಜಿಲ್ಲಾಧ್ಯಕ್ಷ ಬಸಲಿಂಗಪ್ಪ ನಾವಲಗಿ ಹಾಗೂ ಅಭ್ಯಾಸ ವರ್ಗದ ಪ್ರಮುಖ ಜಯಂತ ಕುರಂದವಾಡ ನಿಯಂತ್ರಕರಾಗಿದ್ದರೆ ರಾಜ್ಯ ಸಂಘಟನಾ ಕಾರ್ಯದಶರ್ಿ ಸಂತೋಷಜಿ ಸ್ಪೇಶಲ್ ಸ್ಕ್ವಾಡ ಆಗಿ ಆಗಮಿಸಿದ್ದರು.
ಸಚಿವ ಗೋವಿಂದ ಕಾರಜೋಳ, ಕನರ್ಾಟಕ ವಿದ್ಯುತ್ ಮಗ್ಗಗಳ ನಿಗಮದ ಅಧ್ಯಕ್ಷ ಸಿದ್ದು ಸವದಿ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ಶ್ರೀಕಾಂತ ಕುಲಕಣರ್ಿ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಜಿ.ಎಸ್.ನ್ಯಾಮಗೌಡ, ಮಾಜಿ ಶಾಸಕ ರಾಜಶೇಖರ ಶೀಲವಂತ ಜಿ.ಪಂ ಸದಸ್ಯರು, ಜಿಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲ ಮಂಡಲಗಳ ಪದಾಧಿಕಾರಿಗಳು ಅಭ್ಯಥರ್ಿಗಳಾಗಿದ್ದು ಪರೀಕ್ಷೆಯನ್ನು ಕಟ್ಟು ನಿಟ್ಟಾಗಿ ನಡೆಸಲಾಗಿತ್ತು.
ಭಾರತೀಯ ಜನಸಂಘದ ಸಂಸ್ಥಾಪಕ ಯಾರು..?, ಭಾರತೀಯ ಜನತಾ ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರು ಯಾರು..?, ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯರಾಗಿ ನಾವು ಪ್ರತಿಜ್ಞಾ ಬದ್ಧರಾದ ಪಂಚ ನಿಷ್ಠೆಗಳು ಯಾವುವು..?, ವಂದೇ ಮಾತರಂ ರಣ ಮಂತ್ರ ಬರೆದ ಕವಿ ಯಾರು...?, ಈಗಿನ ರಾಷ್ಟ್ರೀಯ ಅಧ್ಯಕ್ಷರು ಯಾರು..?, ಕನರ್ಾಟಕ ರಾಜ್ಯದ ಅಧ್ಯಕ್ಷರು ಯಾರು..?, ಬಿಜೆಪಿ ಸಕರ್ಾರ ಯಾವ ಯಾವ ರಾಜ್ಯಗಳಲ್ಲಿದೆ..?, 4 ರಾಷ್ಟ್ರೀಯ ಪದಾಧಿಕಾರಿಗಳ ಹೆಸರು ಬರೆಯಿರಿ..?, 6 ರಾಜ್ಯ ಪದಾಧಿಕಾರಿಗಳ ಹೆಸರು ಬರೆಯಿರಿ..?, ಬಾಗಲಕೋಟೆ ಜಿಲ್ಲಾ ಪಂಚಾಯತ್ನಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಎಷ್ಟು...? ಈ ರೀತಿಯ ಹಲವು ಪ್ರಶ್ನೆಗಳು ನಮ್ಮ ಬಿಜೆಪಿ ನಮಗೆಷ್ಟು ಗೊತ್ತು ವಿಷಯದಲ್ಲಾದರೆ ಕೆಳಗೆ ನಮೂದಿಸಿದ ಯೋಜನೆಗಳ ಫಲಾನುಭವಿಗಳು ಯಾರು ಹಾಗೂ ಎಷ್ಟು ಹಣ ಸಿಗುವುದು ಎನ್ನುವ ವಿಷಯದಲ್ಲಿ ವಿವಿಧ ಯೋಜನೆಗಳ ಹೆಸರು ನೀಡಿ ಅದರ ಮುಂದೆ ಖಾಲಿ ಇರುವ ಜಾಗೆಯಲ್ಲಿ ಫಲಾನುಭವಿಗಳು ಹಾಗೂ ಎಷ್ಟು ಹಣ ನೀಡಲಾಗುತ್ತಿದೆ ಎಂದು ಬರೆಯಬೇಕಾಗಿತ್ತು.
ಈ ಪರೀಕ್ಷೆ ಅಭ್ಯಾಸ ವರ್ಗದ ವಿಶೇಷವಾದರೆ ಒಟ್ಟಾರೆ ಅಬ್ಯಾಸ ವರ್ಗ ಸಂಘಟನಾತ್ಮಕ ಬೆಳವಣಿಗೆಯ ಕುರಿತು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಸಂಘಟನಾ ಕಾರ್ಯದಶರ್ಿ ಸಂತೋಷಜಿ ಮಾತನಾಡಿದರು. ಸಂಸದ ಪಿ.ಸಿ.ಗದ್ದಿಗೌಡರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಕನರ್ಾಟಕ ವಿದ್ಯುತ್ ಮಗ್ಗಗಳ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕರಾದ ಶ್ರೀಕಾಂತ ಕುಲಕಣರ್ಿ, ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಜೆ.ಎಸ್.ನ್ಯಾಮಗೌಡ, ಮಾಜಿ ಶಾಸಕ ರಾಜಶೇಖರ ಶೀಲವಂತ, ಜಿ.ಪಂ ಸದಸ್ಯ ಹಣಮಂತ ನಿರಾಣಿ,  ಬಿಟಿಡಿಎ ಸಭಾಪತಿ ಲಿಂಗರಾಜ ವಾಲಿ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲ ಮಂಡಲಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಥಕ್ ನೃತ್ಯ ಖ್ಯಾತಿಯ ಶರ್ವರಿ ಜೆಮಿನಿಸ್ ನೃತ್ಯ


                                                   ಕಥಕ್ ನೃತ್ಯ ಖ್ಯಾತಿಯ ಶರ್ವರಿ ಜೆಮಿನಿಸ್ ನೃತ್ಯ 

  ಬಾಗಲಕೋಟೆ : ಹೆಜ್ಜೆ ಗೆಜ್ಜೆ ನಾದದ ವಿಶೇಷತೆ ಹೊಂದಿರುವ ನೃತ್ಯ ಪ್ರದರ್ಶನದಲ್ಲಿ ಹೆಜ್ಜೆ ಗೆಜ್ಜೆಗಳ ನಾದ ಮೊಳಗಿದಂತೆ ಕರತಾಡನದ ಅಬ್ಬರ ಶತಾಬ್ದಿ ಭವನವನ್ನು ಅಲಂಕರಿಸಿತ್ತು, ಗೋವರ್ಧನ ಗಿರಿಯ ಕಥೆಯ ವಿಶ್ಲೇಷಣೆ ನೃತ್ಯದಲ್ಲಿ ಮೂಡಿಬಂದು ಗೋವರ್ಧನ ಉದ್ದಾರವಾದ ಪ್ರಸಂಗ ವೀಕ್ಷಕರ ಮನಃಸೆಳೆಯಿತು.
ತಿಳಿಬೆಳದಿಂಗಳ ಮಧ್ಯೆ ಬಿ.ವ್ಹಿ.ವ್ಹಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಅಮೆರಿಕ ಖ್ಯಾತಿಯ ಸ್ವರಾಂಜಲಿ ತಂಡದ ಶರ್ವರಿ ಜೆಮಿನಿಸ್ ಕಥಕ್ ನೃತ್ಯ ಪ್ರದಶರ್ಿಸಿದ ಪರಿ ವೀಕ್ಷಕರಿಗೆ ಕಲೆಯ ರಸದೌತನ ಉಣ ಬಡಿಸಿತು.
ಆದಿಶಂಕರಾಚಾರ್ಯ ರಚಿತ ನಾರಿ ನಟೇಶ್ವರ ಸ್ತೋತ್ರದ ನೃತ್ಯದೊಂದಿಗೆ ಆರಂಭವಾದ ಕಥಕ್ ನೃತ್ಯ ಪ್ರದರ್ಶನ ಥಟ್ ಎಂಬ ತಾಳ ಪ್ರದರ್ಶನ ಶರ್ವರಿ ಜೆಮಿನಸ್ ತಬಲಾ ಹಾಗೂ ಹಾಮರ್ೋನಿಯಂ ತಾಳಕ್ಕೆ ತಮ್ಮ ಹೆಜ್ಜೆ ಗೆಜ್ಜೆಯ ನಾದ ಮೊಳಗಿಸಿದರು. ಸ್ತ್ರೀ ಸಶಕ್ತಳು ಎಂಬ ಸಂದೇಶ ಸಾರುವ ಮಾತೆ ಕಾಳಿಯ ನೃತ್ಯ ಖಂಡಜಾತಿಯ ಕಾಳಿಪರನ್ ನೃತ್ಯ ಪ್ರದಶರ್ಿಸಿ ಜಯತು ಜಯ ಮಾ ದುಗರ್ೆ ಎಂಬ ಹಿನ್ನಲೆ ಗಾಯನದಲ್ಲಿ ಈ ನೃತ್ಯ ರೂಪಪಡೆದುಕೊಂಡು ಜನರ ಮನತಟ್ಟಿತು. ನಿಖಿಲ್ ಪಾಠಕ್ (ತಬಲಾ), ಸಾರಂಗ ಕುಲಕಣರ್ಿ (ಹಾಮರ್ೋನಿಯಂ), ಶ್ರೀಮತಿ ವೃಣ್ಮಯಿ ಪಾಠಕ್ ಅವರ ಹಿನ್ನಲೆ ಗಾಯನದೊಂದಿಗೆ ಶರ್ವರಿ ಜೆಮಿನಸ್ ಕಥಕ್ ನೃತ್ಯ ಪ್ರದಶರ್ಿಸಿದರು.
ಗೋವರ್ಧನ ಉದ್ದಾರ ಕಥೆಯ ಸಾರಂಶವನ್ನು ನೃತ್ಯದಲ್ಲಿ ಪ್ರದಶರ್ಿಸಿ ಕಥೆಯ ವಿಶ್ಲೇಷಣೆಯನ್ನು ನಿರೂಪಿಸಿದರು.ನೃತ್ಯದೂದ್ದಕ್ಕೂ ಪ್ರತಿಯೊಂದು ಹಂತದಲ್ಲಿ ಆ ನೃತ್ಯದ ವಿಶೇಷತೆಯನ್ನು ವಿವರಿಸುತ್ತ ನೃತ್ಯ ಪ್ರದಶರ್ಿಸಿದ ಶರ್ವರಿ ಜೆಮಿನಿಸ್ ಭಾರತದಲ್ಲಿ ಭಾರತೀಯ ಸಂಸ್ಕೃತಿ ಕೆಳಗುಂದುತ್ತಿದ್ದು ಅದನ್ನು ಎತ್ತಿ ಹಿಡಿದು ಜಗತ್ತಿಕ್ಕೆ ಸಾರಲು ಸ್ವರಾಂಜಲಿ ತಂಡ ಶ್ರಮಿಸುತ್ತಿದೆ ಎಂದು ಹೇಳಿ ಒಂದು ಕಥೆಯನ್ನು ನೃತ್ಯದಲ್ಲಿ ನಿರೂಪಿಸುವುದೇ ಕಥಕ್ ನೃತ್ಯ, ಅದು ಹೆಜ್ಜೆ ಗೆಜ್ಜೆಗಳ ವೈಶಿಷ್ಠ್ಯತೆಯನ್ನು ಹೊಂದಿದೆ ಎಂದರು.
ಕಾರ್ಯಕ್ರಮವನ್ನು ಬಿ.ವ್ಹಿ.ವ್ಹಿ ಸಂಘದ ಗ್ವವರ ಕಾರ್ಯದಶರ್ಿ ವೀರಣ್ಣ ಹಲಕುಕರ್ಿ ಉದ್ಘಾಟಿಸಿದರು. ಸ್ವರಾಂಜಲಿ ತಂಡದ ಮುಖ್ಯಸ್ಥ ಬಿಜಾಪೂರ ಮೂಲದ ಶಿವುಕುಮಾರ ಹಿರೇಮಠ ಈ ಸಂದರ್ಭದಲ್ಲಿ ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಹೊರದೇಶದ ಜನರಲ್ಲಿ ಮೆಚ್ಚುಗೆ ಮೂಡಿಸಿ ಸಂಸ್ಕೃತಿಯ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರುವ ಕೆಲಸವನ್ನು ಸ್ವರಾಂಜಲಿ ತಂಡದ ಮೂಲಕ ಮಾಡಲಾಗುತ್ತಿದ್ದು ಅಮೆರಿಕ ಸೇರಿದಂತೆ ಯೂರೋಪ್ ದೇಶಗಳಲ್ಲಿ ನೃತ್ಯ ಪ್ರದರ್ಶನಗೊಂಡಿದೆ ಎಂದು ಹೇಳಿದರು.
ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಸಿ.ಎಸ್.ಪಾಟೀಲ ಸ್ವಾಗತಿಸಿದರು. ಡಾ.ಅಶೋಕ ಮಲ್ಲಾಪೂರ ಪರಿಚಯಿಸಿದರು. ಡಾ.ಶಿವು ಸೋಲಬಣ್ಣವರ ವಂದಿಸಿದರು. ತೋಟಗಾರಿಕೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ಬಿ.ದಂಡಿನ್, ಬಿ.ವ್ಹಿ.ವ್ಹಿ ಸಂಘದ ಆಡಳಿತಾಧಿಕಾರಿ ಎನ್.ಜಿ.ಕರೂರ, ಡೀನ್ ಪ್ರಕಾಶಪ್ಪ, ಸದಸ್ಯರು ಸೇರಿದಂತೆ ನಗರಸಭೆ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಭಜಂತ್ರಿ, ಸದಸ್ಯರಾದ ರೇಖಾ ಹುಲುಗಬಾಳಿ, ಭಾಗ್ಯಶ್ರೀ ಹಂಡಿ ಮತ್ತಿತರರು ಉಪಸ್ಥಿತರಿದ್ದರು.

ಲಕ್ಕಿ ನಂಬರ್ 11 ರ ಮಗು.


                                       ಲಕ್ಕಿ ನಂಬರ್ 11 ರ ಮಗು.

ಬಾಗಲಕೋಟೆ : ಮಂಗಳವಾರ ಜನಿಸಿದ ಮಗುವಿಗೆ ಎಲ್ಲವೂ ಹನ್ನೊಂದು ಮಯ, ದಿ.11 ರ 2011 ರಂದು 11 ಗಂಟೆ, 11 ನಿಮಿಷ, 11 ಸೆಕೆಂಡ್ ಗೆ ಈ ಮಗು ಜನಿಸಿದೆ. ಅದು ಮಗುವಿನ ಲಕ್ಕಿ ನಂಬರ್ ಎಂಬುದು ಪಾಲಕರ ನಿರೀಕ್ಷೆ ಮತ್ತು ಆಶಯ.
ಕೆಲವರಿಗೆ 11 ಅಂಕಿ ಲಕ್ಕಿ ನಂಬರ್ ಆದರೆ ಈ ಮಗು ಧರೆಗಿಳಿಯುತ್ತಿದ್ದಂತೆ 11 ಅಂಕಿ ಲಕ್ಕಿ ನಂಬರ್ ಆಗಿದೆ, ತಾಲೂಕ ಪಂಚಾಯತ ಮಾಜಿ ಸದಸ್ಯೆ ಶ್ರೀಮತಿ ನೀಲಮ್ಮ ಶೇಖರಯ್ಯ ಹಿರೇಮಠ ಅವರ ಮೊಮ್ಮಗು ಧರೆಗಿಳಿದಿದ್ದು 11-1-11, 11;11;11 ಕ್ಕೆ, ಶತಮಾನದ ನಂತರವೇ ಆಗಮಿಸುವ ಈ ಸಮಯಕ್ಕೆ ನೀಲಮ್ಮನವರ ಮಗ ವೆಂಕಟೇಶ ಅವರ ಪತ್ನಿ ಕಲಾವತಿಯವರಿಗೆ ಹುಟ್ಟಿದ ಮಗು ದಿನಾಂಕ, ಇಸ್ವಿ ಹಾಗೂ ಸಮಯ ಎಲ್ಲವೂ 11 ಮಯವಾಗಿದ್ದು ಇದು ಆ ಮಗುವಿನ ಲಕ್ಕಿ ನಂಬರ್ ಎಂಬುದು ವೆಂಕಟೇಶ ಹಾಗೂ ಕಲಾವತಿಯವರ ನಂಬಿಕೆ.
ಡಾ.ಶೇಖರ ಮಾನೆ ಯವರ ಆಸ್ಪತ್ರೆಯಲ್ಲಿ ಸರಿಯಾಗಿ ಈ ಸಮಯಕ್ಕೆ ಜನ್ಮತೆಳೆದ ಮಗು ಆರೋಗ್ಯಕರವಾಗಿದ್ದು ಅಜ್ಜ ಶೇಖರಯ್ಯ ಹಿರೇಮಠ ಅವರ ಚೊಚ್ಚಲ ಮೊಮ್ಮಗು ಇದಾಗಿದ್ದು ಕೆಲವರು ಬೇಕುಅಂತಲೆ ಈ ಸಮಯಕ್ಕೆ ಪ್ರಸೂತಿ ಮಾಡಿಸಿಕೊಂಡರು ಸಿಗದ ಈ ಭಾಗ್ಯ ಸಾಮಾನ್ಯ ಹೆರಿಗೆಯಲ್ಲಿ ನಮ್ಮ ಮೊಮ್ಮಗೂವಿಗೆ ಈ ಭಾಗ್ಯ ಸಿಕ್ಕಿದೆ ಎಂದು ಹರ್ಷದಿಂದ ಹೇಳುತ್ತಾರೆ.

ಭಾಸ್ಕರ ಮನಗೂಳಿ

ಬಾಗಲಕೋಟೆಯ ಬೆಳುಕು ಪಂ.ಭೀಮಸೇನ ಜೋಶಿ


                 ಬಾಗಲಕೋಟೆಯ ಸಂಗೀತ ಕಲಾವಿದರೊಂದಿಗೆ ಪಂಡಿತ ಡಾ.ಭೀಮಸೇನ ಜೋಶಿ. ಗಾಯಕ ಅನಂತ ಕುಲಕಣರ್ಿ, ಕಲಾವಿದ ರಾವಸಾಹೇಬ ಮೋಹರೆ, ಕೇಶವ ಜೋಶಿ ಮತ್ತಿತರರು ಚಿತ್ರದಲ್ಲಿದ್ದಾರೆ.

            ಬಾಗಲಕೋಟೆಯ ಬೆಳುಕು ಪಂ.ಭೀಮಸೇನ ಜೋಶಿ

ಬಾಗಲಕೋಟೆ ; ಭಾರತ ರತ್ನ, ಗಾನ ಗಂಧರ್ವ, ಪದ್ಮಶ್ರೀ, ಪದ್ಮವಿಭೂಷಣೆ, ಸಂಗೀತ ಸಾರ್ವಭೌಮ, ಕನಾಟಕ ರತ್ನ ಹೀಗೆ 200 ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾಗಿ ಸಂಗೀತ ಕ್ಷೇತ್ರದ ದಿಗ್ಗಜ, ಸ್ವರ ಸಾಮ್ರಾಟ, ಶೃತಿ, ಲಯ, ತಾಲದ ಅಧಿಪತಿಯಾಗಿದ್ದ ಡಾ.ಪಂಡಿತ ಭೀಮಸೇನ ಜೋಶಿ ಬಾಗಲಕೋಟೆಯ ಶಿಷ್ಯರು, ಅವರ ಜೈತ್ರ ಯಾತ್ರೆಗೆ ಮುನ್ನುಡಿ ಬರೆದಿದ್ದೆ ಬಾಗಲಕೋಟೆ, ಅವರ ಬಾಳಿನ ಪ್ರಮುಖ ಬದಲಾವಣೆಯಾಗಿದ್ದು ಸಹ ಬಾಗಲಕೋಟೆಯಲ್ಲಿ. ಹೀಗಾಗಿ ಅವರು ಬಾಗಲಕೋಟೆಯ ಬೆಳುಕು.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬಾಗಲಕೋಟೆಯ ಸಂಗಾತಿಗಳೆಲ್ಲ ತಮ್ಮ ಮಿತ್ರನನ್ನು ಕಳೆದುಕೊಂಡ ದುಖಃ ಎಲ್ಲ ಮನೆಯಲ್ಲಿಯೂ ಬೀಡು ಬಿಟ್ಟಿದೆ. ಪಂ. ಭೀಮಸೇನ ಜೋಶಿ ವಾಸಿಸುತ್ತಿದ್ದ ಮನೆಯ ಜಂತಿಯೂ ಸಹ ಕಂಬನಿ ಮಿಡಿಯುತ್ತಿದೆ, ಏಕಲವ್ಯ ಧ್ರೋಣಾಚಾರ್ಯರ ಮಧ್ಯೆ ಇದ್ದ ಗುರು-ಶಷ್ಯ ಸಂಬಂಧ ಬಾಗಲಕೋಟೆಯ ಕೆಲವು ಗಾಯಕರು ಪಂ.ಭೀಮಸೇನ ಜೋಶಿಯವರನ್ನು ಗುರು ಎಂದು ಭಾವಿಸುವವರೆಲ್ಲರೂ ಸೇರಿದಂತೆ ಬಾಗಲಕೋಟೆಯ ಅನೇಕ ಮನೆತನಗಳಲ್ಲಿಯೂ ಸಹ ದುಖಃ ಆವರಿಸಿದೆ.
ಪಂ.ಭೀಮಸೇನ ಜೋಶಿಯವರ ಬಾಲ್ಯಾವಸ್ಥೆಯಿಂದಲೇ ಬಾಗಲಕೋಟೆಗೆ ಅವರು ಚಿರಪರಿಚಿತರು, ಖ್ಯಾತ ಗಾಯಕರಾಗಿದ್ದ ಬಾಗಲಕೋಟೆಯ ಪಂ.ಶ್ಯಾಮಾಚಾರ್ಯ ಜೋಶಿ ಇವರ ಆಪ್ತ ಗುರುಗಳಲ್ಲಿ ಒಬ್ಬರಾಗಿದ್ದರು, ದಾಸ ಸಾಹಿತ್ಯದ ರಸದೌತನವನ್ನು ಪಂ.ಭೀಮಸೇನ ಜೋಶಿಯವರಿಗೆ ಉಣಬಡಿಸಿದವರು ಪಂ.ಶ್ಯಾಮಾಚಾರ್ಯ ಜೋಶಿ, ಅನೇಕ ಕಾರ್ಯಕ್ರಮಗಳಲ್ಲಿ ಸ್ವತಃ ಪಂ.ಭೀಮಸೇನ ಜೋಶಿಯವರು ಶಿರಶಾಷ್ಟಾಂಗ ನಮಾಸ್ಕಾರ ಹಾಕಿ ಕೃತಾರ್ಥ ಭಾವನೆಯನ್ನು ವ್ಯಕ್ತಪಡಿಸಿರುವ ನಿದರ್ಶನಗಳು ಇವೆ.
ಕನ್ನಡ ಶುಭೋದಯದ ಆಚಾರ್ಯರು ಎಂದೇ ಖ್ಯಾತರಾಗಿರುವ ಪಂ.ವಾಸುದೇವಾಚಾರ್ಯ ಕೆರೂರ ಅವರ ವಾಸುದೇವ ವಿನೋದಿನಿ ನಾಟ್ಯಸಭಾದ ಅತ್ಯಂತ ಜನಪ್ರೀಯ ನಾಟಕ "ನಲದಮಯಂತಿ" ನಾಟಕದಲ್ಲಿಯೂ ಸಹ ಇವರು ಪಾತ್ರವಹಿಸಿದ್ದರು. ಬಾಗಲಕೋಟೆ ಕಿಲ್ಲೆಯಲ್ಲಿರುವ ಶ್ರೀನಿವಾಸರಾವ್ ಪರ್ವತಿಕರ ಅವರ ಮನೆಯಲ್ಲಿಯೇ 3-4 ತಿಂಗಳಕಾಲ ವಾಸವಾಗಿದ್ದು ನಲದಮಯಂತಿ ನಾಟಕದ ರಂಗ ತಾಲೀಮು ಮಾಡಿ ಪಾಂಡುರಂಗ ಮಂಗಳವೇಡೆ, ಶ್ರೀನಿವಾಸರಾವ್ ಪರ್ವತಿಕರ, ನರಸಿಂಹಾಚಾರ್ಯ ಮಳಗಿ, ಶ್ರೀಮತಿ ಶಾಂತಾ ಪರ್ವತಿ, ಹೆಣ್ಣಿನ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ಬಿಂದುರಾವ್ ಕುಲಕಣರ್ಿ, ನಾರಾಯಣಾಚಾರ್ಯ ಡಂಬಳ, ಟಿ.ಎ.ದೇಶಪಾಂಡೆ(ಹುಲ್ಲಕೇರಿ ದೊರೆ) ಸೇರಿದಂತೆ ಹಲವರಿಗೆ ಪಂ.ಭೀಮಸೇನ ಜೋಶಿ ಕೈಜೋಡಿಸಿದ್ದರು. ಸಂಗೀತ ನಾಟಕವಾಗಿದ್ದ ನಳದಮಯಂತಿ ನಾಟಕದಲ್ಲಿ ಏಕಕಾಲಕ್ಕೆ 42 ಗೀತೆಗಳನ್ನು ಸಾದರಪಡಿಸಿದವರು ಪಂ.ಭೀಮಸೇನ ಜೋಶಿ, ಆಗಿನ ಸಮಯದಲ್ಲೂ ಸಹ ಇವರ ಗಾಯನದಲ್ಲಿರುವ ತಪ್ಪುಗಳನ್ನು ತಿದ್ದಿದವರು ಪಂ.ಶ್ಯಾಮಾಚಾರ್ಯ ಜೋಶಿ.
ನಗರದ ಈಗಿನ ಗುರುಸಿದ್ದೇಶ್ವರ ಟಾಕೀಸ್ ಆವರಣದಲ್ಲಿ ನಳದಮಯಂತಿ ನಾಟಕವನ್ನು ಪ್ರಪ್ರಥಮಬಾರಿಗೆ ಪ್ರದರ್ಶನಗೊಂಡಾಗ ಜನಸಾಗರ ಬಸವೇಶ್ವರ ವತರ್ುಲದವರೆಗೂ ಸೇರಿತ್ತು ಎಂದು ಅವರ ಒಡನಾಡಿಗಳು ಹೇಳುತ್ತಾರೆ, ಪಂ.ಭೀಮಸೇನ ಅವರ ಬಾಳಿನ ಜೈತ್ರಯಾತ್ರೆ ಪ್ರಾರಂಬವಾಗಿದ್ದು ಈ ಸಂದರ್ಭದಲ್ಲಿಯೇ ಎಂದು ಅವರ ಓಡನಾಡಿಗಳು ಹೆಮ್ಮೆಯಿಂದ ಹೇಳುಕೊಳ್ಳುತ್ತಾರೆ. ಅತ್ಯಂತ ತೇಜಸ್ಸಿನಿಂದ ಕೂಡಿದ್ದ ಅವರ ಮುಖದಲ್ಲಿ ಸಂತೋಷ ಯಾವಾಗಲೂ ಎದ್ದು ಕಾಣಿಸುತ್ತಿತ್ತು, ತುಂಟಾಟ ಅವರ ಹವ್ಯಾಸವಾಗಿತ್ತು, ನಳದಮಯಂತಿ ನಾಟಕದಲ್ಲಿ ಹೆಣ್ಣಿನ ಪಾತ್ರ ನಿರ್ವಹಿಸಿದ ಬಿಂದುರಾವ್ ಕುಲಕಣರ್ಿ ಅವರು ಹೆಣ್ಣೋ ಗಂಡೋ ಎಂದು ಸಭೀಕರು ಕೇಳಿದಾಗ, ಸಭೀಕರನ್ನು ಗ್ರೀನ್ ಕೋಣೆಗೆ ಕರೆದುಕೊಂಡು ಹೋಗಿ ಅವರ ಕುತೂಹಲವನ್ನು ತುಂಟತನದಿಂದ ಕೊನೆಗೊಳಿಸಿದರು ಎಂದು ಅಂದಿನ ಅವರ ಓಡನಾಡಿ ಇಂದಿಗೂ ವೈದ್ಯವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಎಂ.ಜಿ.ಕೊಪ್ಪ ಅವರ ಹೇಳುತ್ತಾರೆ.
ಪಂ.ಶ್ಯಾಮಾಚಾರ್ಯ ಜೋಶಿಯವರ ಶಿಷ್ಯರಾಗಿರುವ ಡಾ.ಎಂ.ಜಿ.ಕೊಪ್ಪ ಪಂ.ಭೀಮಸೇನ ಜೋಶಿಯವರ ಆಪ್ತ ಓಡನಾಡಿಗಳಾಗಿದ್ದರು, ಕೆಲ ಕಾರ್ಯಕ್ರಮಗಳಲ್ಲಿ ಪಂ.ಭೀಮಸೇನರ ಗಾಯನಕ್ಕೆ ಇವರು ಸಾಥ್ ನೀಡಿದ್ದಾರೆ, ಬರೋಡಾ, ಕಾನಪೂರ ಮತ್ತಿತರ ಪ್ರದೇಶಗಳಲ್ಲಿ ಪಂ.ಭೀಮಸೇನರ ಕಾರ್ಯಕ್ರಮಗಳನ್ನು ವೀಕ್ಷಿಸಲು ಹೋದಾಗ ಅವರನ್ನು ಗುರುತಿಸಿ  ಪ್ರವೇಶ ಪತ್ರ ನೀಡುವ ಪದ್ಧತಿ ಅವರದ್ದಾಗಿತ್ತು, ಅವರ ಜೊತೆಗಿನ ನೆನಪುಗಳನ್ನು ಮೆಲುಕು ಹಾಕುತ್ತ ಮಾತನಾಡಿದ ಅವರು ಪಂ.ಭೀಮಸೇನರು ಭಾರತ ಸಂಗೀತ ಲೋಕದ ದಿಗ್ಗಜ, ಸಂಗೀತ ಕ್ಷೇತ್ರ ಶ್ರೀಮಂತವಾಗಿರುವುದಕ್ಕೆ ಪಂ.ಭೀಮಸೇನ ಜೋಶಿಯವರೇ ಕಾರಣ ಎಂದು ಹೇಳಿ ಬಾಗಲಕೋಟೆ ಅವರ ಜೈತ್ರ ಯಾತ್ರೆಯ ಮುನ್ನುಡಿಯಾಗಿತ್ತು, ಬಾಗಲಕೋಟೆಯಿಂದಲೇ ಅವರು ಪ್ರಸಿದ್ದಿ ಪಡೆದರು, ಅವರು ಉನ್ನತ ಸ್ಥಾನಕ್ಕೆ ಹೋದರೂ ಸಹ ಬಾಗಲಕೋಟೆಯನ್ನು ನೆನಪಿಸುತ್ತಿದ್ದರು ಎಂದು ಹೇಳುತ್ತಾರೆ. 1971 ರಲ್ಲಿ ಡಾ.ಜಿ.ಆರ್.ದಾತಾರ, ಸಿ.ಎನ್.ದೇಶಪಾಂಡೆ, ಪ್ರೊ.ಕೆ.ವ್ಹಿ.ಸುಬ್ಬರಾವ್ ಅವರ ನೇತೃತ್ವ ಕನರ್ಾಟಕ ಸಂಘ ಜೋಶಿಯವರ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ನಂತರ 1980, 94 ರವಧಿಯಲ್ಲಿ ಎರಡು ಬಾರಿ ಕಾರ್ಯಕ್ರಮಗಳು ನಡೆದಿವೆ, ಅವರಿಗೆ ಭಾರತ ರತ್ನ ಪ್ರಶಸ್ತಿ ದೊರೆತಾಗ ಅವರನ್ನು ನಗರಕ್ಕೆ ಬರಮಾಡಿಕೊಂಡು ಸನ್ಮಾನಿಸುವ ನ್ಯಾಯವಾದಿ ಅಚ್ಯುತ ಕೊಪ್ಪ ಅವರ ಅಲಾಪ್ ಸಂಸ್ಥೆಯ ಪ್ರಯತ್ನ ಫಲನೀಡದಿದ್ದಾಗ ಅವರ ಅನುಪಸ್ಥಿತಿಯಲ್ಲಿ ಪಂ.ಪ್ರವೀಣ ಗೋಡಖಿಂಡಿ ಅವರ ಸಂಗೀತ ಕಾರ್ಯಕ್ರಮವನ್ನು ಅಭಿನಂದನಾ ಕಾರ್ಯಕ್ರಮವನ್ನಾಗಿ ಅಪರ್ಿಸಲಾಯಿತು, ಪಟ್ಟದಕಲ್ಲು ಉತ್ಸವದ ಉದ್ಘಾಟನೆಯ ಪ್ರಯತ್ನ ಕೂಡ ನಡೆದಿತ್ತು, ಆದರೆ ಆರೋಗ್ಯ ಅವರಿಗೆ ಅನುಮತಿ ನೀಡಲಿಲ್ಲ, ಏನೇ ಆಗಲಿ ಬಾಗಲಕೋಟೆ ಪಂ.ಭೀಮಸೇನ ಜೋಶಿಯವರ ಬದುಕಿಗೆ ಮಹತ್ವದ ತಿರುವು ನೀಡಿತು ಎಂಬುದು ಅವರೇ ಒಪ್ಪುವ ಮಾತು.
ನಗರದಲ್ಲಿದ್ದ ಹಂಪಿಹೋಳೆ ಮನೆತನಕ್ಕೆ ಪಂ.ಭೀಮಸೇನ ಜೋಶಿಯವರ ತಮ್ಮನ್ನನ್ನು ದತ್ತು ನೀಡಿದ್ದು ಸಹ ಇತಿಹಾಸದಲ್ಲಿ ದಾಖಲಾಗಿದೆ, ಕಿಲ್ಲಾ ಭಾಗ ಪಂ.ಭೀಮಸೇನರ ಅತ್ಯಂತ ಒಡನಾಡಿ ಭಾಗವಾಗಿತ್ತು, ಅವರ ವಿಧಿವಶವಾಗುತ್ತಿದ್ದಂತೆ ಅವರು ವಾಸವಾಗಿದ್ದ ಈಗಿನ ಕೆ.ಎಸ್.ಪರ್ವತಿಕರ ಅವರ ಮನೆಯ ಜಂತಿಯೂ ಸಹ ಕಂಬನಿ ಮಿಡಿಯುತ್ತಿತ್ತು, ಅವರ ರಂಗ ತಾಲೀಮುಕ್ಕೆ ಸಾಕ್ಷಿ ನಮ್ಮ ಮನೆಯ ಜಂತಿಗಳೆಂದು ದುಖಃದಿಂದ ಹೇಳುತ್ತಾರೆ, ಮನೆಯ ಸದಸ್ಯನೋರ್ವನ್ನು ಕಳೆದುಕೊಂಡಂತೆ ದುಖಃದಲ್ಲಿರುವ ಕೆ.ಎಸ್.ಪರ್ವತಿ ಅವರ ಮನೆಯಲ್ಲಿ ಮೌನ ಮನೆಮಾಡಿದೆ.
ಕಿರಿಯ ಕಲಾವದರ ಮಾಡುವ ತಪ್ಪುಗಳನ್ನು ತಿದ್ದಿ ಅವರಿಗೆ ಸ್ಪೂತರ್ಿ ನೀಡುತ್ತಿದ್ದ ಪಂ.ಭೀಮಸೇನ ಜೋಶಿಯವರಿಗೆ ಪೂಣೆಯಲ್ಲಿ ಮಂತ್ರಾಲಯದ ಶ್ರೀ ಸುಶುಮೀಂದ್ರತೀರ್ಥ ಮಹಾಸ್ವಾಮಿಗಳು ಪ್ರಶಸ್ತಿ ನೀಡುವ ಸಂದರ್ಭದಲ್ಲಿ ನನ್ನ ಕಾರ್ಯಕ್ರಮ ಆಯೋಜನೆಯಾಗಿತ್ತು, ಅವರ ಸಮ್ಮುಖದಲ್ಲಿಯೇ ನಾನು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದೆ, ಕಾರ್ಯಕ್ರಮದ ನಂತರ ಪಂ.ಭೀಮಸೇನರನ್ನು ಭೇಟಿಯಾಗಿ ನಾನು ಬಾಗಲಕೋಟೆಯವನು ಎಂದು ಹೇಳಿದಾಗ ಅವರ ಸಂತೋಷ ಮುಗಿಲುಮುಟ್ಟಿತ್ತು, ನೀನೊಬ್ಬ ಒಳ್ಳೆಯ ಗಾಯಕ ಎಂದು ಪ್ರಶಂಶಿಸಿ ನನಗೆ ಸ್ಪೂತರ್ಿ ನೀಡಿದ್ದರೂ ಎಂದು ಅಳುತ್ತ ಹೇಳುತ್ತಾರೆ ಖ್ಯಾತ ಗಾಯಕ ನಗರದ ಅನಂತ ಕುಲಕಣರ್ಿಯವರು.

ಭಾಸ್ಕರ ಮನಗೂಳಿ

Sunday, December 12, 2010

ಚನೈನಲ್ಲಿ ನಡೆಯುವ ಅಂತರಾಷ್ಟ್ರೀಯ ಶ್ವಾನ ಪ್ರದರ್ಶನದಲ್ಲಿ ಮುಧೋಳ ನಾಯಿ

ಚನೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಗುರುವಾರ ನಗರದಿಂದ ಚನೈಗೆ ಹೊರಟ ಮುಧೋಳ ತಳಿ ನಾಯಿಗಳ ತಂಡಕ್ಕೆ ಪಶು ಸಂಗೋಪನಾ ಇಲಾಖೆಯ ಉಪನಿದರ್ೇಶಕ ಎಂ.ಎಸ್.ಪಾಳೇಗಾರ ಹಾಗೂ ಇಲಾಖೆಯ ಅಧಿಕಾರಿಗಳು ಶುಭ ಕೋರಿದರು.

ಬಾಗಲಕೋಟೆ  ;  ಆದಿಲ್ ಶಾಹಿ ರಾಜ್ಯದ ರಾಜಧಾನಿ ಬಿಜಾಪೂರದ ಅಂದಿನ ಅವಿಭಾಜ್ಯ ಅಂಗವಾಗಿದ್ದ ಮುಧೋಳ ಪ್ರಾಂತ್ಯದ ಶ್ರೀಮಂತ ರಾಜ ಮಾಲೋಜಿರಾವ್ ಘೋರ್ಪಡೆ ಮತ್ತು ಲೆಫ್ಟಿನಂಟ್ ನಾನಾ ಸಾಹೇಬ ಚಂದನಶಿವಾ ಅವರು ಪೋಷಣೆಯಲ್ಲಿ ಅಭಿವೃದ್ದಿ ಹೊಂದಿದ ಮುಧೋಳ ತಳಿ ನಾಯಿ ಈಗ ಅಂತರಾಷ್ಟ್ರೀಯ ಮಟ್ಟದ ತಳಿಗಳಲ್ಲಿ ಸೇರ್ಪಡೆಯಾಗಿದ್ದು ಡಿಸೆಂಬರ್ ದಿ.11 ಹಾಗೂ 12 ರಂದು ಚನೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲು ನಗರದಿಂದ ಇಂದು ತೆರಳಿದವು.
ಬೇಟೆ ಯಾಡಲು ಸುಪ್ರಸಿದ್ದವಾಗಿರುವ ಮುಧೋಳ ತಳಿ ನಾಯಿಗಳು ಅತ್ಯಂತ ಬಲಿಷ್ಠ ಸ್ನಾಯುಗಳನ್ನು ಹೊಂದಿದ್ದು ಓಟಕ್ಕೆ ಅನುಕೂಲವಾಗುವಂತೆ ಕಾಲುಗಳು ಮತ್ತು ದೇಹರಚನೆ ಇದ್ದು ಗಾಳಿಯನ್ನು ಸೀಳಿಕೊಂಡು ಮುನ್ನುಗ್ಗುವ ಪೈಪೋಟಿ ಹೊಂದಿರುವ ಈ ನಾಯಿಗಳು ಅತ್ಯಂತ ಪ್ರಾಮಾಣಿಕ ಕಾವಲುಗಾರ ನಾಯಿಯಾಗಿದೆ. ಒಟ್ಟು 23 ಅತ್ಯುತ್ತಮ ಹಾಗೂ ಪ್ರದರ್ಶನದಲ್ಲಿ ಭಾಗವಹಿಸಲು ಯೋಗ್ಯವುಳ್ಳ ನಾಯಿಗಳು ಬಾಗಲಕೋಟೆಯಿಂದ ತೆರಳಿದ್ದು 8 ಹೆಣ್ಣು ನಾಯಿ ಹಾಗೂ 15 ಗಂಟು ನಾಯಿಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ.
ಡೊಂಕು ಬಾಲದ ನಾಯಿಗಳ ವಿರುದ್ದವಾಗಿ ಈ ನಾಯಿಗಳ ಬಾಲ ನೇರವಾಗಿ ಇರುತ್ತದೆ, ತನ್ನದೆ ಆದ ವೈಶಿಷ್ಠ್ಯತೆ ಹೊಂದಿರುವ ಈ ನಾಯಿ ತಳಿಗೆ ಅಂತರಾಷ್ಟ್ರೀಯ ಮಟ್ಟಕ್ಕೆ ಸೇರ್ಪಡೆಯಾಗಿರುವದು ಕನರ್ಾಟಕದ ಹೆಮ್ಮೆಯ ಪ್ರತೀಕವಾಗಿದೆ. ಇಂದು ಸ್ಥಳೀಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಈ ನಾಯಿ ತಳಿಯ ಸರ್ವತೋಮುಖ ಅಭಿವೃದ್ದಿಗೆ ಅನೇಕ ಯೋಜನೆಗಳನ್ನು ಸಹ ಹಾಕಿಕೊಂಡಿದ್ದು ಕನರ್ಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ ಮುಧೋಳದ ತಿಮ್ಮಾಪೂರ ರಸ್ತೆಯಲ್ಲಿ ಶ್ವಾನ ಸಂಶೋಧನಾ ಕೇಂದ್ರವನ್ನು ಸಹ ಪ್ರಾರಂಭಿಸುತ್ತಿದೆ. ಸಕರ್ಾರ ಹಾಗೂ ವಿಶ್ವವಿದ್ಯಾಲಯಕ್ಕಿಂತ ಮುಖ್ಯವಾಗಿ ಮುಧೋಳದ ರಾಜ ಮಾಲೋಜಿರಾವ್ ಘೋರ್ಪಡೆ ಕುಟುಂಬ ಲೆಫ್ಟಿನೆಂಟ್ ಚಂದನಶಿವ ಕುಟುಂಬಕ್ಕೆ ಈ ನಾಯಿ ತಳಿ ಅಭಿವೃದ್ದಿ ಪಡಿಸುವದಕ್ಕಾಗಿ ಇನಾಮ ನೀಡಿದ್ದರು, ಇಂದಿಗೂ ಚಂದನಶಿವ ಕುಟುಂಬ ಈ ನಾಯಿ ತಳಿಯನ್ನು ಪೋಷಿಸಿ ಅಭಿವೃದ್ದಿ ಪಡಿಸುತ್ತಿದ್ದಾರೆ.
ಮುಧೋಳ ತಳಿ ನಾಯಿಯನ್ನು 1969 ರಲ್ಲಿಯೇ ಭಾರತ ರಾಷ್ಟ್ರೀಯ ಕೆನಲ್ ಕ್ಲಬ್ ನಿಂದ ಅಂಗೀಕ್ರತಗೊಂಡಿತ್ತು ಅಲ್ಲದೆ 1990 ರಲ್ಲಿ ಮೈಸೂರು ಕೆನಲ್ ಕ್ಲಬ್ ಈ ತಳಿಯ ನಾಯಿಗಳ ಪ್ರದರ್ಶನಕ್ಕಾಗಿ ಪ್ರಮುಖ ವೇದಿಕೆ ಕಲ್ಪಿಸಿಕೊಟ್ಟಿತ್ತು. ಸಧ್ಯ ಈ ತಳಿ ನಾಯಿ ಅಂತರಾಷ್ಟ್ರೀಯ ಮಟ್ಟದ ತಳಿಗಳಲ್ಲಿ ಸೇರ್ಪಡೆಯಾಗಿದೆ.
ಶ್ವಾನಗಳನ್ನು ಹಾಗೂ ಶ್ವಾನ ಮಾಲೀಕರನ್ನು ಬೀಳ್ಕೊಟ್ಟು ಈ ಸಂದರ್ಭದಲ್ಲಿ ಮಾತನಾಡಿದ ಪಶು ಸಂಗೋಪನಾ ಇಲಾಖೆಯ ಉಪನಿದರ್ೇಶಕ ಎಂ.ಎಸ್.ಪಾಳೇಗಾರ ಅಂತರಾಷ್ಟ್ರೀಯ ಮಟ್ಟದ ತಳಿಗಳಲ್ಲಿ ಸೇರ್ಪಡೆಯಾಗಿರುವ ಮುಧೋಲ ನಾಯಿ ಪ್ರಥಮ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದು ಮುಧೋಳ ನಾಯಿ ತಳಿಗಳನ್ನು ಜಗತ್ತಿನಾದ್ಯಂತ ಪರಿಚಯಿಸಲು ಈ ಪ್ರದರ್ಶನ ಸಹಕಾರಿಯಾಗಲಿದೆ ಎಂದರು.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ರ ವಿರುದ್ದ ಪ್ರಪ್ರಥಮವಾಗಿ ಬಂಡಾಯ ಎದ್ದಿದ್ದ ಮುಧೋಳ ತಾಲೂಕಿನ ಹಲಗಲಿಯ ವೀರರಾದ ರಾಮ, ಬಾಲ, ಜಡಗಾ ಅವರ ಸಾತ್ ನೀಡಿದ ನಾಯಿ ತಳಿ ಸಧ್ಯ ಅಂತರಾಷ್ಟ್ರೀಯ ಮಟ್ಟದ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಚನೈಗೆ ತೆರಳಿವೆ. ಮುಧೋಳ ತಳಿ ನಾಯಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಹೊಂದುತ್ತಿರುವದು ಹೆಮ್ಮೆ ಸಂಗತಿ ಎಂದು ಸಾರ್ವಜನಿಕರು ಹರ್ಷದಿಂದ ಹೇಳುತ್ತಿದ್ದಾರೆ.